Advertisement

ಜಿಎಸ್‌ಬಿ ಸೇವಾ ಮಂಡಲ ಸಯಾನ್‌: ಗಣೇಶೋತ್ಸವ ಪೂರ್ವಭಾವಿ ಸಭೆ

03:44 PM Aug 26, 2018 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ಇದರ 64 ನೇ ವಾರ್ಷಿಕ ಗಣೇಶೋತ್ಸವದ ಪೂರ್ವಭಾವಿ ಸಭೆಯು ಸಯಾನ್‌ನಲ್ಲಿರುವ ಸೇವಾ ಮಂಡಳದ ಶ್ರೀ ಗುರುಗಣೇಶ್‌ ಪ್ರಸಾದ ಸಭಾಗೃಹದಲ್ಲಿ ಆ. 11ರಂದು ಸಂಜೆ ನಡೆಯಿತು.

Advertisement

ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರು ಅಧ್ಯಕ್ಷತೆ ವಹಿಸಿ  ಪ್ರಾರ್ಥನೆಗೈದು, ಶ್ರೀ ಕಾಶೀ ಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಸಂಯಮೀದ್ರತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಂದಿಸಿದರು. ಬಳಿಕ ಪ್ರಸಕ್ತ ಗಣೇಶೋತ್ಸವಕ್ಕೆ ಪೂಜೆ, ಸೇವೆ ಇತ್ಯಾದಿಗಳಿಂದ ಜಮೆಯಾಗಿರುವ ಗಳಿಕೆಯ ವಿವರವನ್ನು ನೀಡಿದರು.

ಪ್ರಧಾನ ಅರ್ಚಕ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಅವರು ದೇವತಾ ಪ್ರಾರ್ಥನೆಗೈದರು. ಸಹ ಸಂಚಾಲಕ ಗಣೇಶ್‌ ಪ್ರಭು ಅವರು ತನ್ನ ಅನಿಸಿಕೆಯಲ್ಲಿ ಖ್ಯಾತ ಉದ್ದಿಮೆದಾರರಿಗೆ ನಮ್ಮ ಗಣೇಶೋತ್ಸವದ ಬಗ್ಗೆ ಅರಿವು ಮೂಡಿಸಿದಾಗ ಹೆಚ್ಚು ಧನ ಸಹಾಯ ಮಾಡಲು ಸಾಧ್ಯವಿದೆ ಎಂದರು.

ಸೇವಾ ಮಂಡಳದ ಉಪಾಧ್ಯಕ್ಷ ಯಶವಂತ್‌ ಕಾಮತ್‌ ಅವರು ಗಣೇಶೋತ್ಸವಕ್ಕೆ ಸ್ವಲ್ಪ ದಿನಗಳು ಮಾತ್ರ ಉಳಿದಿದ್ದು, ಆದ್ದರಿಂದ ಸ್ವಯಂ ಸೇವಕರು ಗಳಿಕೆಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಸಂಚಾಲಕ ಜಿ. ಡಿ. ರಾವ್‌ ಅವರು ಮಾತನಾಡಿ, ಪೂಜೆ, ಸೇವೆ ಇತ್ಯಾದಿಗಳ ರಶೀದಿ ಪುಸ್ತಕಗಳು ಕಳೆದ ವರ್ಷಕ್ಕಿಂತ ಈ ವರ್ಷ ಸ್ವಯಂ ಸೇವಕರು ಹೆಚ್ಚು ಪಡೆದುಕೊಂಡಿರುವುದನ್ನು ಗಮನಿಸಿದಾಗ ಈ ವರ್ಷ ಖಂಡಿತವಾಗಿಯೂ ಹೆಚ್ಚು ಗಳಿಕೆಯಾಗಲು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಪಡಿಸಿದರು.

Advertisement

ಕೃಷ್ಣ ಭಟ್‌ ಅವರು ಮಾತನಾಡಿ, ದೇವರಲ್ಲಿ ವಿಶ್ವಾಸ ಹಾಗೂ ಶ್ರದ್ಧೆ ಇಟ್ಟಲ್ಲಿ ಯಾವುದೇ ಘನ ಕಾರ್ಯಗಳು ನಡೆಯಲು ಸಾಧ್ಯವಿದೆ. ನಮ್ಮ ಗಣಪತಿಯಲ್ಲಿ ಪ್ರಾರ್ಥಿಸಿದಂತೆ ಭಕ್ತರಿಗೆ ಲಭಿಸಿದ ಒಳಿತಿನ ಬಗ್ಗೆ ತಿಳಿಸಿದರು.

ಹಿರಿಯ ಸ್ವಯಂ ಸೇವಕ ಸತೀಶ್‌ ರಾಮ್‌ ನಾಯಕ್‌ ಅವರು, ಗಣೇಶೋತ್ಸವ ಮಂಟಪದ ಕಾಮಗಾರಿಯ ವಿವರ ನೀಡಿ, ಪ್ಲಾಸ್ಟಿಕ್‌ ಚೀಲವನ್ನು ಬಳಸದಿರಲಿ ಎಂದು ವಿನಂತಿಸಿದರು.

ಸೇವಾ ಮಂಡಳದ ಅಧ್ಯಕ್ಷ ರಮೇಶ್‌ ಭಂಡಾರ್ಕರ್‌ ಅವರು ಸ್ವಯಂ ಸೇವಕರು, ಗಣೇಶೋತ್ಸವದ ಸಮಯ, ಆಯಾ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಬೇಕು. ಐದು ದಿನಗಳ ಗಣೇಶೋತ್ಸವದಲ್ಲಿ ಸಾವಿರಾರು ಪೂಜೆ, ಸೇವೆಗಳು ನೆರವೇರಬೇಕಾಗುತ್ತದೆ. ಸರ್ವರೂ ಸಹಕರಿಸುವಂತೆ ವಿನಂತಿಸಿದರು. ಮುಂದಿನ ಸಭೆಯು ಆ. 25ರಂದು ಸಂಜೆ 7.35ಕ್ಕೆ ಜಿಎಸ್‌ಬಿ ಸೇವಾ ಮಂಡಲ ಶ್ರೀ ಗುರುಗಣೇಶ್‌ ಪ್ರಸಾದ್‌ ಸಭಾಗೃಹದ ಸಯಾನ್‌ ಪೂರ್ವ ಇಲ್ಲಿ ನಡೆಯಲಿದೆ ಎಂಬುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next