Advertisement

ನೆಲಮಂಗಲ: ಸಿಡಿಲು ಬಡಿದು ಮನೆಗಳಿಗೆ ಹಾನಿ

06:19 PM Apr 11, 2020 | Suhan S |

ನೆಲಮಂಗಲ: ಗುರುವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿ ಹಾಗೂ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್‌ ಸರ್ಕ್ನೂಟ್‌ ಹಾಗೂ ವಿದ್ಯುತ್‌ ಉಪಕರಣಗಳು ಸಂಪೂರ್ಣ ಹಾನಿಗೀಡಾಗಿದ್ದು, ಮನೆ ಮಾಲಿಕರು ಕಂಗಾಲಾಗಿದ್ದಾರೆ.

Advertisement

ನಗರಸಭೆ ವ್ಯಾಪ್ತಿಯ ಹೊನ್ನಗಂಗಯ್ಯನ ಪಾಳ್ಯ ಹಾಗೂ ವಿನಾಯಕ ನಗರದಲ್ಲಿ ಹೈಟೆನ್ಷನ್‌ ವೈರ್‌ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಾಗಿಲಿಗೆ ಸಿಡಿಲು ಬಡಿದ ಪರಿಣಾಮ ಸುತ್ತಮುತ್ತಲ ಮನೆಗಳಲ್ಲಿನ 15 ಟೀವಿ, 5

ಫ್ರಿಡ್ಜ್, 5 ಪ್ಯಾನ್‌, ಮನೆಯಲ್ಲಿನ ವೈರಿಂಗ್‌, ಸ್ವಿಚ್‌ ಬೋರ್ಡ್‌ಗಳು, 3 ಯುಪಿಎಸ್‌, ಎಸಿ ಗಳು ಹಾನಿಗೀಡಾಗಿವೆ. ಸಿಡಿಲು ಬಡಿತದಿಂದ ಮನೆಗಳಿಗೆ ಹೊಸದಾಗಿ ವೈರಿಂಗ್‌ ಮಾಡುವ ಅನಿವಾರ್ಯ ಎದುರಾಗಿದೆ. ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಕತ್ತಲೆಯ ಜೀವನ: ಲಾಕ್‌ಡೌನ್‌ನಿಂದ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿ ಸಿಡಿಲು ಬಡಿದು ಮತ್ತಷ್ಟು ಕಂಗಾಲಾಗಿಸಿದೆ. ಮನೆ ವಿದ್ಯುತ್‌ ಸಂಪರ್ಕಕ್ಕೆ ಹಾನಿಯಾಗಿದ್ದು, ವಿದ್ಯುತ್‌ ಚಾಲಿತ ಉಪಕರಣಗಳು ಹಾನಿಯಾಗಿದೆ. ಇನ್ನೂ ಸರಿಪಡಿಸಲು ಯಾರು ಬರುವುದಿಲ್ಲ. ಹೊಸದಾಗಿ ತರಲು ಅಂಗಡಿ ಬಂದ್‌ ಇವೆ. ಹೀಗಾಗಿ ಕತ್ತಲೆ ಜೀವನ ಅಥವಾ ದೀಪದ ಬೆಳಕಿನ ಬದುಕು ಮಾಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಮನೆ ಮಾಲಿಕರು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next