Advertisement
ಉದ್ಯಮಗಳ ಸಂಘಟನೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಮೂರು ವರ್ಷಗಳಲ್ಲಿ 21 ವಲಯಗಳಲ್ಲಿ 87 ಸುಧಾರಣೆಗಳನ್ನು ಮಾಡಿದ್ದೇವೆ. 30 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ನಾವು ಪಾರದರ್ಶಕ, ಸಂವೇದನಶೀಲ ಮತ್ತು ಜನರ ಅಗತ್ಯವನ್ನು ಅರ್ಥೈಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ ಎಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಅಗತ್ಯವಿದೆ ಎಂದು ಉದ್ಯಮ ಬಯಸಿತು. ನಾವು ಅದನ್ನು ಒದಗಿಸಿ ದ್ದೇವೆ. ಈ ವ್ಯವಸ್ಥೆ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿದಷ್ಟೂ ಸಲೀಸಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ ಅದರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದಿದ್ದಾರೆ. ಮೋದಿ-ಸಿಂಗ್ ಹಸ್ತಲಾಘವ
ಗುಜರಾತ್ ಚುನಾವಣ ಪ್ರಚಾರದ ವೇಳೆ ವಾಗ್ಯುದ್ಧ ನಡೆಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹಸ್ತಲಾಘವ ನಡೆಸಿದ್ದಾರೆ. 2001ರ ಸಂಸತ್ ದಾಳಿಯಲ್ಲಿ ಹುತಾತ್ಮರಾದ ವರಿಗೆ ಗೌರವ ಅರ್ಪಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿದೆ. ಸಂಜೆಯ ವೇಳೆಗೆ ಮಾಜಿ ಪಿಎಂ ಮನಮೋಹನ್ ಸಿಂಗ್ ಗುಜರಾತ್ನಲ್ಲಿ ಪಾಕಿಸ್ಥಾನ ಟೀಕೆಯ ಮಾತಿನಿಂದ ತಮಗೆ ನೋವಾಗಿದೆ ಎಂಬ ಬಗ್ಗೆ ಹೇಳಿರುವ ವೀಡಿಯೋ ಕೂಡ ಬಿಡುಗಡೆಯಾಗಿದೆ.