Advertisement

ಕರ್ನಾಟಕವು ಅಭಿವೃದ್ಧಿಯ ಶಕ್ತಿ ಕೇಂದ್ರ: ಪ್ರಧಾನಿ ಮೋದಿ

07:17 PM Mar 13, 2023 | Team Udayavani |

ನವದೆಹಲಿ: ಕರ್ನಾಟಕವು ಅಭಿವೃದ್ಧಿಯ ಶಕ್ತಿ ಕೇಂದ್ರ ಆಗಿದೆ. ಅನೇಕ ವಲಯಗಳಲ್ಲಿ ರಾಜ್ಯವು ದೇಶಕ್ಕೆ ಕೊಡುಗೆ ನೀಡುತ್ತಿದೆ. ಈ ಅದ್ಭುತ ರಾಜ್ಯದ ಜನರ ಸೇವೆ ಸಲ್ಲಿಸುವುದು ಒಂದು ಗೌರವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.

Advertisement

ಭಾನುವಾರ ಕರ್ನಾಟಕದ ಮಂಡ್ಯ ಮತ್ತು ಧಾರವಾಡಕ್ಕೆ ಭೇಟಿ ನೀಡಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಅವರು ಇದನ್ನು ಸ್ಮರಿಸುತ್ತಾ ಟ್ವೀಟ್‌ ಮಾಡಿದ್ದು, “ಮಂಡ್ಯ ಭೇಟಿಯು ಅದ್ಭುತವಾಗಿತ್ತು. ಅಲ್ಲಿಯ ಜನರ ಪ್ರೀತಿ, ವಾತ್ಸಲ್ಯವು ಸದಾ ನೆನೆಯುವಂಥದ್ದು,’ ಎಂದು ಬರೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕರ್ನಾಟಕಕ್ಕೆ ಭೇಟಿ ನೀಡಿದ್ದ ಅವರು, ಸುಮಾರು 16,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು.

ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ನೂತನ ಕಟ್ಟಡ ಉದ್ಘಾಟಿದ್ದರು. ಇದೇ ವೇಳೆ ಈ ಎರಡು ನಗರಗಳಲ್ಲಿ ಬೃಹತ್‌ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next