Advertisement

ಕೆಸರೆರೆಚುವವರಿಗೆ ಋಣಿ; ಕಮಲ ಅರಳುವುದೇ ಕೆಸರಲ್ಲಿ: ಪ್ರಧಾನಿ ಮೋದಿ

12:08 PM Nov 27, 2017 | udayavani editorial |

ಅಹ್ಮದಾಬಾದ್‌ : ವಿಧಾನಸಭಾ ಚುನಾವಣೆಯತ್ತ ಧಾವಿಸುತ್ತಿರುವ ಗುಜರಾತ್‌ನ ಭುಜ್‌ನಲ್ಲಿ ಇಂದು ಸೋಮವಾರ ಬೃಹತ್‌ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಮೇಲೆ ಕೆಸರೆರೆಚಿದವರಿಗೆ ನಾನು ಋಣಿ; ಏಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ’ ಎಂದು ಮಾರ್ಮಿಕವಾಗಿ ನುಡಿದರು. 

Advertisement

“ಇಷ್ಟೊಂದು ದೊಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ನೆರೆದಿರುವ ಕಚ್‌ನ ಜನರಿಗೆ ನಾನು ಆಭಾರಿಯಾಗಿದ್ದೇನೆ; ನೀವು ತೋರಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ’ ಎಂದು ಮೋದಿ ಹೇಳಿದರು. 

“ಜನರೊಂದಿಗೆ ಸಂವಾದದಲ್ಲಿ ತೊಡಗುವುದೆಂದರೆ ನನಗೆ ಪಂಚಪ್ರಾಣ; ಅದರಿಂದ ಸಿಗುವ ಆನಂದ, ಸಂತೋಷ ವರ್ಣನಾತೀತ; ನನ್ನ ಬದುಕಿನ ಪ್ರತೀಯೊಂದು ಕ್ಷಣವೂ ದೇಶದ 125 ಕೋಟಿ ಭಾರತೀಯರ ಕಲ್ಯಾಣಕ್ಕೆ ಮೀಸಲಾಗಿದೆ’ ಎಂದು ಮೋದಿ ಕಿವಿಗಡಚಿಕ್ಕುವ ಕರತಾಡತನದ ನಡುವೆ ಘೋಷಿಸಿದರು.

ಮೋದಿ ಅವರಿಂದ ಇನ್ನೂ ಮೂರು ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ; ಜಸ್‌ದನ್‌, ಧರೀ, ಮತ್ತು ಕಾಮ್‌ರೇಜ್‌ನಲ್ಲಿ ಈ ರಾಲಿಗಳು ನಡೆಯಲಿವೆ. 

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾಗರದೋಪಾದಿಯಲ್ಲಿ ನೆರೆದಿರುವ ಜನರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮೋದಿ ಮನವಿ ಮಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next