Advertisement

ಬಡ ವರ್ಗದ ಏಳಿಗೆಗೆ ಅನುದಾನ: ಶಾಸಕ ಬಾವಾ

11:16 AM Oct 29, 2017 | Team Udayavani |

ಬೈಕಂಪಾಡಿ: ಇಲ್ಲಿನ ಅಂಗರಗುಂಡಿ ಪ್ರದೇಶವು ಹೆದ್ದಾರಿ ಹಾಗೂ ನಗರಕ್ಕೆ ಹತ್ತಿರವಿರುವ ಪ್ರದೇಶವಾಗಿದ್ದು, ಮೂಲಸೌಕರ್ಯ ಸಹಿತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುದಾನ ಒದಗಿಸಲಾಗಿದೆ ಎಂದು ಶಾಸಕ ಮೊಯಿದಿನ್‌ ಬಾವಾ ಹೇಳಿದರು.

Advertisement

ಬೈಕಂಪಾಡಿಯ ಅಂಗರಗುಂಡಿಯಲ್ಲಿ ಕಾಂಕ್ರಿಟ್‌ ರಸ್ತೆಯನ್ನು ಜನಸಂಚಾರಕ್ಕೆ ಮುಕ್ತಗೊಳಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನುಡಿದಂತೆ ನಡೆಯುತ್ತಿದ್ದು, ಬಡ ವರ್ಗದ ಏಳಿಗೆಗಾಗಿ ಸಾವಿರಾರು ಕೋ.ರೂ. ಅನುದಾನ ಒದಗಿಸಿದೆ ಎಂದರು.

ಸ್ಥಳೀಯರ ಸಹಕಾರ ಅಗತ್ಯ
ಸ್ಥಳೀಯ ಕಾರ್ಪೊರೇಟರ್‌ ಪುರುಷೋತ್ತಮ ಚಿತ್ರಾಪುರ ಮಾತನಾಡಿ, ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ಸಾರ್ವಜನಿಕರ
ಸಹಕಾರವಿದ್ದಾಗ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾರ್ಪೊರೇಟರ್‌ ಕುಮಾರ್‌ ಮೆಂ
ಡನ್‌, ಉದ್ಯಮಿ ಅಸ್ಗರ್‌ ಆಲಿ, ಜಮಾತ್‌ ಅಧ್ಯಕ್ಷ ನಾಸೀರ್‌ ಲಕ್ಕಿಸ್ಟಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌, ಹ್ಯಾರಿಸ್‌ ಬೈಕಂಪಾಡಿ, ಇಲ್ಯಾಸ್‌, ಸೈದುದ್ದಿನ್‌, ರಾಜ ಬಂಗೇರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next