Advertisement

ದಶಮಾನೋತ್ಸವ ಸಂಭ್ರಮಕ್ಕೆ ಅದ್ದೂರಿ ಚಾಲನೆ

05:18 PM Sep 30, 2019 | Team Udayavani |

ಮುಂಬಯಿ, ಸೆ. 29: ಬಂಟ ಸಮಾಜದ ಪ್ರತಿಷ್ಠಿತ ಮೀರಾ-ಡಹಾಣು ಬಂಟ್ಸ್‌ ಇದರ ದಶಮಾನೋತ್ಸವ ಸಮಾರಂಭವು ಸೆ. 28ರಂದು ಸಂಜೆ ಭಾಯಂದರ್‌ ಪೂರ್ವದ ಇಂದ್ರಲೋಕ್‌ ಫೇಸ್‌ 3ರ ಸಮೀಪದ ಪ್ರಮೋದ್‌ ಮಹಾಜನ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.

Advertisement

ಮೀರಾ-ಡಹಾಣು ಬಂಟ್ಸ್‌ನ ಗೌರವ ಅಧ್ಯಕ್ಷರಾದ ಡಾ| ವಿರಾರ್‌ ಶಂಕರ್‌ ಬಿ. ಶೆಟ್ಟಿ, ಅಧ್ಯಕ್ಷರಾದ ಅರವಿಂದ ಆನಂದ ಶೆಟ್ಟಿ, ಟ್ರಸ್ಟಿಗಳಾದ ಪ್ರಕಾಶ ಹೆಗ್ಡೆ, ಭುಜಂಗ ಶೆಟ್ಟಿ ಬೋಯಿಸರ್‌, ಸಂತೋಷ್‌ ಶೆಟ್ಟಿ ಡಹಾಣು, ಸುರೇಶ್‌ ಶೆಟ್ಟಿ ಗಂಧರ್ವ, ಸಂಚಾಲಕ ನಾಗರಾಜ ಶೆಟ್ಟಿ, ಉಪಾಧ್ಯಕ್ಷರಾದ ಸಂಪತ್‌ ಶೆಟ್ಟಿ ಪಂಜದಗುತ್ತು, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ, ಕೋಶಾಧಿಕಾರಿ ರವಿ ರೈ ಬೊಯಿಸರ್‌, ಜತೆ ಕಾರ್ಯದರ್ಶಿ ವಸಂತ್‌ ಶೆಟ್ಟಿ, ಜತೆ ಕೋಶಾಧಿಕಾರಿ ಅರುಣ್‌ ಶೆಟ್ಟಿ ಪಣಿಯೂರು, ಸಲಹೆಗಾರರಾದ ಭಾಸ್ಕರ ಶೆಟ್ಟಿ ಬೊಯಿಸರ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಎಸ್‌. ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಸುಜಾತಾ ಜೆ. ಶೆಟ್ಟಿ, ಕಾರ್ಯದರ್ಶಿ ಲತಾ ಎ. ಶೆಟ್ಟಿ, ಕೋಶಾಧಿಕಾರಿಗಳಾದ ಯಶೋದಾ ಬಿ. ಶೆಟ್ಟಿ ಮತ್ತು ಅಮಿತಾ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಮಂಜುಳಾ ಆರ್‌. ರೈ, ಸಲಹೆಗಾರದ ಸಹಾನಿ ವಿ. ಶೆಟ್ಟಿ, ವಿಶಾಲಾ ಆರ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಾ ಶೆಟ್ಟಿ, ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಮಹಾಬಲ ಸಮಾನಿ, ಉಪ ಕಾರ್ಯಾಧ್ಯಕ್ಷ ಅರುಣ್‌ ಶೆಟ್ಟಿ ಸಾಂತೂರು, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ದಿವಾಕರ್‌ ಶೆಟ್ಟಿ ಪೊಸ್ರಾ, ಮೀರಾ-ಡಹಾಣು ಬಂಟ್ಸ್‌ ಇದರ ನಾಯ್ಗಾಂವ್ ವಿರಾರ್ಪ್ರಾ ದೇಶಿಕ ಸಮಿತಿ ಕಾರ್ಯಾಧ್ಯಕ್ಷ ಅಶೋಕ್‌ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿ ಜಿ. ಶೆಟ್ಟಿ, ಮೀರಾ-ಡಹಾಣು ಬಂಟ್ಸ್‌ ಇದರ ಮೀರಾ- ಭಾಯಂದರ್‌ ಪ್ರಾದೇಶಿಕ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಶೆಟ್ಟಿ, ಮೀರಾ-ಡಹಾಣು ಬಂಟ್ಸ್‌ ಬೊಯಿಸರ್‌ ಪಾಲ್ಘರ್ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ, ಮಹಿಳಾ ವಿಭಾಗದ ಪ್ರೇಮಾ ಬಿ. ಶೆಟ್ಟಿ, ಮೀರಾ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರೋಶನ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ರೈ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಚೇತನ್‌ ಶೆಟ್ಟಿ ಹಾಗೂ ಮಹಿಳಾ ಸದಸ್ಯೆಯರು, ವಿವಿಧ ಸಮಿತಿಗಳ ಸರ್ವ ಸದಸ್ಯರು ಉಪಸ್ಥಿತರಿದ್ದು ದಶಮಾನೋತ್ಸವಕ್ಕೆ ಚಾಲನೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾದೇಶಿಕ ಸಮಿತಿಗಳ ಸದಸ್ಯರಿಂದ ವಿವಿಧ ವಿನೋದಾವಳಿಗಳು. ವಿಸ್ಮಯ ವಿನಾಯಕ್‌ ಬಳಗದವರಿಂದ ಹಾಸ್ಯ, ವಿಜಯ ಶೆಟ್ಟಿ ಮೂಡುಬೆಳ್ಳೆ ಅವರಿಂದ ಸಂಗೀತ ರಸ ಮಂಜರಿ ಜರಗಿತು. ಸಮಾರಂಭದಲ್ಲಿ ಮೀರಾ-ಡಹಾಣು ಬಂಟ್ಸ್‌ ಸ್ಥಾಪಕ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ವಸಾಯಿ, ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಬೊಯಿಸರ್‌, ಸ್ಥಾಪಕ ಸದಸ್ಯರಾದ ಸಂತೋಷ್‌ ಶೆಟ್ಟಿ ಡಹಾಣು ಮತ್ತು ಸಂತೋಷ್‌ ರೈ ಬೆಳ್ಳಿಪಾಡಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ನಿತೇಶ್‌ ಶೆಟ್ಟಿ ಎಕ್ಕಾರ್‌ ನಿರ್ವಹಿಸಿದರು. ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

Advertisement

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next