Advertisement

ತಾಕತ್ತಿದ್ದರೆ ಮುಂಬೈನಲ್ಲಿ ನನ್ನೆದುರು ಸ್ಪರ್ಧಿಸಿ: ಖರ್ಗೆಗೆ ಗೋಯಲ್‌

05:50 PM Aug 09, 2018 | udayavani editorial |

ಹೊಸದಿಲ್ಲಿ : ‘ಮುಂಬಯಿಯಲ್ಲಿ ನನ್ನ ಎದುರು ಚುನಾವಣೆಗೆ ನಿಂತು ನಿಮ್ಮ ತಾಕತ್ತು ತೋರಿಸಿ’ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಅವರಿಂದು ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ. 

Advertisement

‘ಈ ವರೆಗೆ ಯಾವುದೇ ಸ್ಥಳೀಯ ಚುನಾವಣೆಯನ್ನೂ ಗೆಲ್ಲದಿರುವ ಗೋಯಲ್‌ ಅವರನ್ನು ರಾಜ್ಯಸಭೆಗೆ ತಂದು ಹಣಕಾಸು ಸಚಿವರನ್ನಾಗಿ ಮಾಡಲಾಗಿದೆ’ ಎಂದು ಖರ್ಗೆ ಹೇಳಿದ್ದ ಲೇವಡಿಯ ಮಾತಿಗೆ ಗೋಯಲ್‌ ಈ ರೀತಿ ಸವಾಲಿನ ತಿರುಗೇಟು ನೀಡಿದರು. 

ಗೋಯಲ್‌  ಲೋಕಸಭೆಯಲ್ಲಿಂದು ಜಿಎಸ್‌ಟಿ ಕಾನೂನಿಗೆ ತಿದ್ದುಪಡಿಗಳನ್ನು ತರುವ ಸಲುವಾಗಿ 45 ನಿಮಿಷಗಳ ಭಾಷಣ ಮಾಡಿದ ಸಂದರ್ಭದಲ್ಲಿ ಖರ್ಗೆ ಅವರಿಗೆ ‘ಚುನಾವಣಾ ಸವಾಲು’ ಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next