Advertisement

ಗೌಡರ ಆಪಾದನೆಯಿಂದ ನೋವಾಗಿದೆ: ಎ.ಮಂಜು

07:00 AM Jan 27, 2018 | Team Udayavani |

ಹಾಸನ: ಮಹಾಮಸ್ತಕಾಭಿಷೇಕದ ಕಾಮಗಾರಿಗಳಲ್ಲಿ ಕಮಿಷನ್‌ ವ್ಯವಹಾರ ಮಾಡುತ್ತಿದ್ದೇನೆಂದು ಆರೋಪಿಸಿ ನನ್ನ
ತೇಜೋವಧೆ ಮಾಡಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಉತ್ತರ ಕೊಡಲು ಅವಕಾಶಕ್ಕಾಗಿ
ಕಾಯುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಪ್ರತಿಕ್ರಿಯಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರ ಆಪಾದನೆಯಿಂದ ನನಗೆ ತುಂಬಾ ನೋವಾಗಿದೆ. ನಾನು ದೇವೇಗೌಡರ ಬಗ್ಗೆ ಎಂದೂ ಹಗುರವಾಗಿ ಮಾತನಾಡಿಲ್ಲ. ಆದರೆ ಪ್ರಧಾನಿ ಹುದ್ದೆ ನಿರ್ವಹಿಸಿದ ಅವರು ನನ್ನ ಬಗ್ಗೆ ಛೀ, ಥೂ ಎಂದು ಮಾತನಾಡಿ ರುವುದು ದೇಶಕ್ಕೆ, ಈ ನಾಡಿಗೆ ಅವಮಾನ ಎಂದರು.

ದಾಖಲೆ ನೀಡುವೆ: ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ. ಮತ್ತು ರಸ್ತೆ ಅಭಿವೃದ್ಧಿಗೆ 89
ಕೋಟಿ ರೂ. ನೀಡಿದೆ. ಈ ಅನುದಾನದ ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿವರವನ್ನೂ ದಾಖಲೆ ಸಹಿತ ಬಿಡುಗಡೆ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next