Advertisement

Govt ಸರಕಾರಿ ಶಾಲೆಗಳತ್ತ ಗಮನ ಹರಿಸಲಿ : ಶಾಸಕ ಸಿದ್ದು ಸವದಿ

07:55 PM Aug 07, 2023 | Team Udayavani |

ಮಹಾಲಿಂಗಪುರ : ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳತ್ತ ಗಮನ ಹರಿಸಿ ಶಾಲೆಗಳಿಗೆ ಕುಡೊಯುವ ನೀರು, ಕಾಂಪೌಂಡ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಒತ್ತಾಯಿಸಿದರು.

Advertisement

ಸೋಮವಾರ ಪಟ್ಟಣದ ಬಸವನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಶೌಚಾಲಯ ಇಲ್ಲದಿರುವದನ್ನು ಕಂಡು, ನೂರಾರು ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದು ವಿಷಾದನೀಯ.ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸಚಿವರು ಸರ್ಕಾರಿ ಶಾಲೆಗಳ ದುಸ್ಥಿತಿಯ ಕುರಿತು ಅಧ್ಯಯನ ನಡೆಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.

ತಕ್ಷಣ ಈ ಶಾಲೆಗೆ ಅವಶ್ಯವಿರುವ ತುರ್ತು ಅಗತ್ಯಸೌಲಭ್ಯಗಳ ಕೊರತೆಯ ಪಟ್ಟಿ ಮಾಡಿ ನನಗೆ ಮತ್ತು ಶಿಕ್ಷಣ ಇಲಾಖೆಗೆ ನೀಡಿ, ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ಕೊಡುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಸದಸ್ಯ ಎಸ್.ಬಿ.ಅಂಗಡಿ, ರವಿ ಗಿರಿಸಾಗರ, ಮಹಾಂತೇಶ್ ಪಾತ್ರೋಟ, ಮಲ್ಲಪ್ಪ ಟಿರ್ಕಿ, ಮಹೇಶ್ ಜಿಡ್ಡಿಮನಿ, ಶಾಲೆಯ ಮುಖ್ಯಗುರುಮಾತೆ ಶ್ರೀಮತಿ ಎ.ಬಿ.ಕುಂದಗೋಳ, ಸೋರಗಾಂವಿ, ಶಿವಸಿಂಪಿ, ಗೌಡರ, ಕುಳ್ಳೊಳ್ಳಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next