Advertisement

ಮಂಡ್ಯ ರೈತರ ಕಬ್ಬು ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಲಿ : ಸುಮಲತಾ ಅಂಬರೀಶ್

06:02 PM Jul 05, 2021 | Team Udayavani |

ಬೆಂಗಳೂರು : ಮೈಶುಗರ್ ಆರಂಭವಾಗೋವರೆಗೂ ಮಂಡ್ಯದ ರೈತರ ಕಬ್ಬು ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಲಿ‌ ಅಂತ ಮನವಿ ಮಾಡಿದ್ದೇನೆ ಎಂದು ಸಿಎಂ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದಾರೆ.  ಪ್ರಸಕ್ತ ಸಮಸ್ಯೆಗಳು, ಜಿಲ್ಲೆಯ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ಮೈ ಶುಗರ್ ಬಗ್ಗೆ ಎರಡು ವರ್ಷದಿಂದ 20 ಬಾರಿ ಮಾತಾಡಿದ್ದೇನೆ. ರೈತರು ತಾಳ್ಮೆ ಕಳ್ಕೊಳ್ತಿದ್ದಾರೆ. ಕಾರ್ಖಾನೆ ಆರಂಭ ಮಾಡಬೇಕು ಅಂತ ಹೇಳಿದೀನಿ ಎಂದು ಸುಮಲತಾ ಹೇಳಿದ್ದಾರೆ.

Advertisement

ಕಾರ್ಖಾನೆಯನ್ನು ಸರ್ಕಾರವೇ ಆರಂಭ ಮಾಡುತ್ತೆ ಅಂತ ಹೇಳಿದ್ದಾರೆ ಸಿಎಂ. ಎಚ್ಡಿಕೆ ಸಮರ್ಥನೆ ಮಾಡಿಕೊಳ್ಳಲು ಈಗ ಏನೇ ಹೇಳಬಹುದು. ಆದ್ರೆ ಅವರು ಒಮ್ಮೆ ಹೇಳಿದ ಮಾತು ಉಳಿದಕೊಂಡಿದೆ. ಎಚ್ಡಿಕೆ ತಮ್ಮ‌ಹೇಳಿಕೆ ಬಗ್ಗೆ ಕ್ಷಮೆ ಕೇಳಲಿ ಕೆಆರೆಸ್ ಡ್ಯಾಮ್ ಬಾಗಿಲಿಗೆ ಅಡ್ಡ ಮಲಗಿಸಿಬಿಟ್ಟರೆ ನೀರು ನಿಲ್ಲುತ್ತೆ ಎಂಬ ಎಂಬ ತಮ್ಮ ಹೇಳಿಕೆ ಬಗ್ಗೆ ಎಚ್ಡಿಕೆ ಸ್ಪಷ್ಟನೆ ಗೆ ಸುಮಲತಾ ಪ್ರತಿಕ್ರಿಯೆ ನೀಡಿ0ದ್ದಾರೆ.

ಎಚ್ಡಿಕೆ ಇವತ್ತು ತಮ್ಮ ಗೌರವ ಕಳೆದುಕೊಂಡಿದ್ದಾರೆ. ಕೆಆಆರ್ ಎಸ್ ಡ್ಯಾಂ ಬಿರುಕು ಬಗ್ಗೆ ಮಾಧ್ಯಮಗಳಲ್ಲೇ ವರದಿಗಳು ಬಂದಿದ್ವು. ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಅಂತ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ನಾನು ಡ್ಯಾಂ ಬಿರುಕು ಹೇಳಿಕೆ ಕೊಟ್ಟಿದ್ದೇನೆ ಎಂದರು.

ಸರ್ಕಾರ ತನಿಖೆ ನಡೆಸಲಿ ಡ್ಯಾಂ ಬಿರುಕು ಇಲ್ಲ‌ ಅಂತ ಕೆಲವರು ಅಷ್ಟೊಂದು ಸಮರ್ಥಿಸಿಕೊಳ್ತಿರೋದು ಯಾಕೆ? ಇದರಲ್ಲಿ ಏನೋ ಇದೆ ಅನ್ನೋ ಅನುಮಾನ ಎಲ್ರಿಗೂ ಬರುತ್ತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next