Advertisement

ಉಗ್ರ ದಾಳಿ ಬಗ್ಗೆ ಜಾಗ್ರತೆ ವಹಿಸಿ: ಮೋದಿ ಸರಕಾರ, ಗುಪ್ತಚರ ದಳಕ್ಕೆ ಕಾಂಗ್ರೆಸ್‌ ಆಗ್ರಹ

09:54 AM Jun 14, 2019 | Sathish malya |

ಹೊಸದಿಲ್ಲಿ : ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಿನ್ನೆ ಬುಧವಾರ ಪಾಕ್‌ ಮೂಲದ ಉಗ್ರರ ಗುಂಡಿನ ದಾಳಿಗೆ ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾದುದನ್ನು ಅನುಸರಿಸಿ, “ಈ ರೀತಿಯ ದಾಳಿಗಳು ಭವಿಷ್ಯದಲ್ಲಿ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್‌ ಪಕ್ಷ, ಮೋದಿ ಸರಕಾರ ಮತ್ತು ಗುಪ್ತಚರ ದಳವನ್ನು ಆಗ್ರಹಿಸಿದೆ.

Advertisement

ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್‌ಜೇವಾಲಾ ಅವರು ಮಾಡಿರುವ ಟ್ವೀಟ್‌ ನಲ್ಲಿ, ‘ಉಗ್ರರ ದಾಳಿಗೆ ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿ ನಾಲ್ವರು ಜವಾನರು ಗಾಯಗೊಂಡ ಘಟನೆಯನ್ನು ತಿಳಿದು ಆಘಾತವಾಯಿತು. ಈ ರೀತಿಯ ಉಗ್ರ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ ಮೋದಿ ಸರಕಾರ ಮತ್ತು ಗುಪ್ತಚರ ದಳ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next