Advertisement

ಆಧಾರ್‌ ಜೋಡಣೆ ಗಡುವು ಡಿಸೆಂಬರ್‌ 31ರ ವರೆಗೆ ವಿಸ್ತರಣೆ

07:55 AM Sep 29, 2017 | |

ಹೊಸದಿಲ್ಲಿ : ಸರಕಾರದಿಂದ ಲಭಿಸುವ ವಿವಿಧ ಸಬ್ಸಿಡಿಗಳು ಮತ್ತು ವಿವಿಧ ಜನ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಧಾರ್‌ ಜೋಡಣೆಗೆ ನೀಡಲಾಗಿದ್ದ ಗಡುವನ್ನು  ಡಿ. 31ರ ವರೆಗೆ  ವಿಸ್ತರಿಸಲಾಗಿದೆ. ಆದರೆ  ಈ ವಿಸ್ತರಣೆಯು  ಆಧಾರ್‌ಗಾಗಿ ಇನ್ನೂ  ಅರ್ಜಿ ಸಲ್ಲಿಸದ ಸಾರ್ವಜನಿಕರಿಗೆ  ಮಾತ್ರವೇ ಅನ್ವಯವಾಗಲಿದೆ. 

Advertisement

ಬಡ ಮಹಿಳೆಯರಿಗೆ  ಉಚಿತ ಎಲ್‌ಪಿಜಿ, ಸೀಮೆಎಣ್ಣೆ,ರಸಗೊಬ್ಬರ ಸಬ್ಸಿಡಿ, ಸಾರ್ವಜನಿಕ ವಿತರಣ ವ್ಯವಸ್ಥೆ  ಮತ್ತು  ಮನೆÅàಗಾ  ಸಹಿತ  ಕೇಂದ್ರ ಸರಕಾರದ   35 ಖಾತೆಗಳ  ಸುಮಾರು 135 ಜನಕಲ್ಯಾಣ  ಯೋಜನೆಗಳಿಗೆ ಆಧಾರ್‌ನ್ನು  ಸರಕಾರ ಕಡ್ಡಾಯಗೊಳಿಸಿದೆ. ಈ ಹಿಂದೆ  ಸರಕಾರ ಆಧಾರ್‌ ಸಂಯೋಜನೆಗೆ ಸೆ.30ರ ಗಡುವನ್ನು ವಿಧಿಸಿತ್ತು.  ಈಗ‌ ಈ ಗಡುವನ್ನು ಮೂರು ತಿಂಗಳು ವಿಸ್ತರಿಸಿ ಇದೀಗ ಆದೇಶ  ಹೊರಡಿಸಲಾಗಿದೆ. ಈ ವಿಸ್ತರಣೆಯು ಪಿಂಚಣಿ, ವಿದ್ಯಾರ್ಥಿವೇತನ, ನೌಕರರ  ಪಿಂಚಣಿ ಯೋಜನೆ-1995, ಅಟಲ್‌ ಪಿಂಚಣಿ ಯೋಜನೆ ಮತ್ತಿತರ ಎಲ್ಲ ಯೋಜನೆಗಳಿಗೂ  ಅನ್ವಯವಾಗಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next