Advertisement

ಎಲ್ಲಾ ತಳಿಯ ಈರುಳ್ಳಿ ರಫ್ತನ್ನು ನಿಷೇಧಿಸಿದ ಕೇಂದ್ರ ಸರ್ಕಾರ

01:22 PM Sep 15, 2020 | keerthan |

ಹೊಸದಿಲ್ಲಿ: ವಿದೇಶಗಳಲ್ಲಿ ಭಾರಿ ಬೇಡಿಕೆ ಹೊಂದಿರುವ ಬೆಂಗಳೂರಿನ ರೋಜ್ ಈರುಳ್ಳಿ, ಆಂಧ್ರದ ಕೃಷ್ಣಾಪುರಂ ಈರುಳ್ಳಿ ಸೇರಿ ಎಲ್ಲಾ ತಳಿಯ ಈರುಳ್ಳಿ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ನೀಡಿದೆ.

Advertisement

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಫ್ತಿನ ಮೇಲೆ ನಿಷೇಧ ಹೇರಿದೆ.

ಆದರೆ ವಿವಿಧ ಆಹಾರ ಉತ್ಪನ್ನಗಳಿಗೆ ಪೂರಕವಾಗಿ ಬಳಸಲಾಗುವ ಕತ್ತರಿಸಿದ, ಹೋಳುಗೈದ, ಒಣಗಿಸಿ ಪುಡಿ ಮಾಡಿರುವ ಈರುಳ್ಳಿಯ ರಫ್ತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ಮೂವಿ ಮಾಫಿಯಾಗೆ ಆದಿತ್ಯ ನಂಟು!: ಉದ್ಧವ್‌ ಪುತ್ರನ ವಿರುದ್ಧ ಬಾಲಿವುಡ್‌ ನಟಿ ಕಂಗನಾ ಆರೋಪ

ಮಹಾರಾಷ್ಟ್ರದ ನಾಶಿಕ್ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ:ಇಂದು ಎಂಜಿನಿಯರ್ ದಿನ : ವಿಶ್ವದ ಶೇ.25ರಷ್ಟು ಎಂಜಿನಿಯರ್‌ಗಳು ಭಾರತೀಯರು

Advertisement

Udayavani is now on Telegram. Click here to join our channel and stay updated with the latest news.

Next