Advertisement

ಚಿರತೆ ಪುನರ್ವಸತಿ ಕೇಂದ್ರ ತೆರೆಯಲು ಸರ್ಕಾರ ಕ್ರಮ

09:19 PM Feb 21, 2023 | Team Udayavani |

ವಿಧಾನಸಭೆ: ನಾಗರಿಕ ಪ್ರಪಂಚಕ್ಕೆ ತೊಂದರೆ ನೀಡುವ ಚಿರತೆಗಳನ್ನು ಹಿಡಿದು ಪುನರ್ವಸತಿ ಕೇಂದ್ರ ಅಥವಾ ಪ್ರತ್ಯೇಕ ಅಭಯಾರಣ್ಯ ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದೆ.

Advertisement

ಮಂಡ್ಯ ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸದನಕ್ಕೆ ಈ ಉತ್ತರ ನೀಡಿದ್ದಾರೆ.

ಸರ್ಕಾರ ನೀಡಿರುವ ಮಾಹಿತಿ ಪ್ರಕಾರವೇ 2021-22ರಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಚಿರತೆ ದಾಳಿಯಿಂದ 410 ಜಾನುವಾರು ಹತ್ಯೆಯಾದ ಪ್ರಕರಣ ದಾಖಲಾಗಿದೆ. ಚಿರತೆಗಳು ಕಬ್ಬಿನ ಗದ್ದೆಯಲ್ಲಿ ಮರಿ ಹಾಕುತ್ತಿದ್ದು ರೈತರ ಮೇಲೆ ದಾಳಿ ಮಾಡುತ್ತಿವೆ.

ಜಾನುವಾರುಗಳನ್ನು ಕೊಲ್ಲುತ್ತಿವೆ. ಚಿರತೆ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯವರನ್ನು ಕಳಿಸಿ ಎಂದು ಜನರಿಂದ ಪ್ರತಿ ದಿನ 6-7 ಕರೆಗಳು ಬರುತ್ತಿವೆ ಎಂದು ಶ್ರೀಕಂಠಯ್ಯ ಕಳವಳ ವ್ಯಕ್ತಪಡಿಸಿದಾಗ, 60 ಸಿಬ್ಬಂದಿ ಇರುವ ಚಿರತೆ ಟಾಸ್ಕ್ ಫೋರ್ಸ್‌ ಮಾಡಿದ್ದು, 19 ಚಿರತೆಗಳನ್ನು ಮಂಡ್ಯ ಭಾಗದಲ್ಲಿ ಈಗಾಗಲೇ ಹಿಡಿಯಲಾಗಿದೆ. ಚಿರತೆ ಮೇಲೆ ಏಕಾಏಕಿ ಗುಂಡು ಹಾರಿಸಲು ಸಾಧ್ಯವಿಲ್ಲ. ಹೀಗಾಗಿ ಹಿಡಿದು, ಅಭಯಾರಣ್ಯ, ಪುನರ್‌ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next