Advertisement

ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ : ಯಾದವ

07:48 PM May 22, 2019 | Sriram |

ಸುರತ್ಕಲ್‌: ಯಶಸ್ಸು ಕನಸಲ್ಲ. ಯಶಸ್ಸನ್ನು ಗಳಿಸುವಲ್ಲಿ ಛಲ ಬಲದೊಂದಿಗೆ ಗುರಿಯನ್ನು ಸಾ ಸುವವರಾಗಿ ಎಂದು ಒರಿಯಂಟಲ್‌ ಇನ್ಶೂರೆನ್ಸ್‌ ಕಂಪೆನಿಯ ಪ್ರಬಂಧಕ ಯಾದವ ದೇವಾಡಿಗ ಹೇಳಿದರು.

Advertisement

ಗೋವಿಂದದಾಸ ಪ.ಪೂ. ಕಾಲೇಜಿನ 2019 20ರ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಹಿತಿ ಕಾರ್ಯಾಗಾರದಲ್ಲಿ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿಗಳಾದ ಎಂ. ವೆಂಕಟ್ರಾವ್‌ ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು. ಆಡಳಿತಾತ್ಮಕ ನಿರ್ದೇಶಕರಾದ ಪ್ರೊಣ ವೈ.ವಿ. ರತ್ನಾಕರರಾವ್‌ ಅವರು ಜೀವನದಲ್ಲಿ ಶಿಸ್ತು ಮತ್ತು ನಿಯಮ ಬದ್ಧ ಕಲಿಕಾ ವಿಧಾನದ ಬಗ್ಗೆ ತಿಳಿಸಿದರು.

ಸತೀಶ್‌ ಸದಾನಂದ ತರಬೇತಿ ಕಾರ್ಯ ಕ್ರಮದ ಬಗ್ಗೆ ವಿವರಿಸಿದರು. ಕಾಲೇಜಿನ ಆರೋಗ್ಯ ಸಲಹೆಗಾರರಾದ ಡಾಣ ಗೀತಾ ಶರತ್‌ ಅವರು ವಿದ್ಯಾರ್ಥಿಗಳ ಮನೋ ವೈಜ್ಞಾನಿಕತೆಯ ಬಗ್ಗೆ ತಿಳಿಸಿದರು.

ಪ್ರಾಂಶುಪಾಲ ಪ್ರೊಣ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದ್ವಿತೀಯ ಪಿಯುಸಿಯಲ್ಲಿ ಅತ್ಯ ಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ದೀಪಾ ಬಾಳಿಗ, ರಶ್ಮಿ ಜೆ. ಅಂಚನ್‌, ನಿಪುಣ್‌ ಆರ್‌. ಸಾಲ್ಯಾನ್‌ ಕಾಲೇಜಿನಲ್ಲಿ ಬಗ್ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next