Advertisement

ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ: ಪಾದಯಾತ್ರೆ ಕುರಿತು ಕಾರಜೋಳ

12:04 PM Jan 09, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಮೀರಿ ಜನ ಸೇರುತ್ತಿದ್ದಾರೆ. ಇದರಿಂದ ಕೋವಿಡ್ ಉಲ್ಬಣಸುವ ಸಂಭವವಿದೆ. ಹೀಗಾಗಿ ಕೋವಿಡ್ ನಿಯಮದಂತೆ ಪ್ರತಿಭಟನೆ ಮಾಡಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ನಮ್ಮ ಸರ್ಕಾರದ ಅಭ್ಯಂತರ ಇಲ್ಲ. ಆದರೆ ನೀವು ಸಾವಿರ ಸಾವಿರ ಜನ ಸೇರಿಸುವುದರಿಂದ ಕೋವಿಡ್ ಹೆಚ್ಚಾಗುತ್ತದೆ. ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ ಎಂದರು.

ಇದನ್ನೂ ಓದಿ:ಕಾವೇರಿ ಸಂಗಮದಲ್ಲಿ ಕಾಂಗ್ರೆಸ್ ನಾಯಕರು ನಾಡಿನ ಜನತೆಯ ಕ್ಷಮೆ ಕೇಳಬೇಕು: ಆರಗ ಜ್ಞಾನೇಂದ್ರ

ಕ್ರಮ ತೆಗೆದುಗೊಳ್ಳುವುದೊಂದೇ ಪರಿಹಾರ ಅಲ್ಲ. ನಾವು ಕಾನೂನು ಗೌರವಿಸಬೇಕು. ಜನರ ಜೀವ ಉಳಿಸಬೇಕು. ಸಮಾಜದಲ್ಲಿ ನಾವು ಆದರ್ಶ ವ್ಯಕ್ತಿಗಳಾಗಿರಬೇಕಾದರೆ ಕಾನೂನು ಪಾಲಿಸಬೇಕು ಎಂದು ಗೋವಿಂದ ಕಾರಜೋಳ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next