Advertisement

ರಾಜ್ಯದ‌‌ ನೀರು ಉಪಯೋಗಿಸಲು ಯಾರ ಅಪ್ಪಣೆಯೂ ಬೇಕಿಲ್ಲ : ಸಚಿವ ಕಾರಜೋಳ

12:09 PM Aug 17, 2021 | Team Udayavani |

ಹೊಸಪೇಟೆ : ರಾಜ್ಯದ‌ ನೀರು ಉಪಯೋಗಿಸಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಬಾಗಿನಾ ಅರ್ಪಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ಯೋಜನೆ ವಿಚಾರವಾಗಿ ಅಣ್ಣಾ ಮಲೈ ಹೇಳಿಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ನೀರು ಉಪಯೋಗಿಸಲು ಯಾರ ಅಪ್ಪಣೆ ಯೂ ಅಗತ್ಯವಿಲ್ಲ.

ತಮಿಳುನಾಡು ಬಿಜೆಪಿ‌ ಘಟಕದ ಅದ್ಯಕ್ಷ ಅಣ್ಣಾ ಮಲೈ ಅವರು ತಮ್ಮ ರಾಜ್ಯ ಹಿತದೃಷ್ಟಿಯಿಂದ ಮಾತನಾಡಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿ ಇರುವುದರಿಂದ ಈ‌ ಕುರಿತು ಹೆಚ್ಚು ಹೇಳಲಾರೆ ಎಂದರು.

ಇದನ್ನೂ ಓದಿ :ಪುತ್ತೂರು : ತಡರಾತ್ರಿ ಜಾತಿ ನಿಂದನೆ ಮಾಡಿ ಹಲ್ಲೆ : ಮಹಿಳೆಯ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next