Advertisement

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

07:54 PM Aug 04, 2021 | Team Udayavani |

ನವದೆಹಲಿ: ಹದಿನಾಲ್ಕು ವರ್ಷಗಳ ಕಾಲ ಜೀವಾವಧಿ ಶಿಕ್ಷೆಗೆ ಗುರಿಯಾದವರನ್ನು ಕಾರಾಗೃಹದಿಂದ ಅವಧಿಗೆ ಮೊದಲು ಬಿಡುಗಡೆಯ ಅಧಿಕಾರ ಯಾರಿಗೆ? ರಾಜ್ಯ ಸರ್ಕಾರಕ್ಕೋ ಅಥವಾ ರಾಜ್ಯಪಾಲರಿಗೋ? ಈ ಬಗ್ಗೆ ಇದ್ದ ಗೊಂದಲಕ್ಕೆ ಸುಪ್ರೀಂಕೋರ್ಟ್‌ ತೆರೆ ಎಳೆದಿದೆ.

Advertisement

ಅಪರಾಧ ದಂಡ ಸಂಹಿತೆಯ ಪ್ರಕಾರ ರಾಜ್ಯ ಸರ್ಕಾರಗಳಿಗೆ ಬಿಡುಗಡೆಯ ಅಧಿಕಾರ ಅಲ್ಲ. ಅದೇನಿದ್ದರೂ, ರಾಜ್ಯಪಾಲರಿಗೇ ಸೇರಿದ್ದು ಎಂದು ನ್ಯಾ.ಹೇಮಂತ್‌ ಗುಪ್ತಾ ಮತ್ತು ನ್ಯಾ.ಎ.ಎಸ್‌.ಬೋಪಣ್ಣ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದರೆ, ಸಂವಿಧಾನದ 161ನೇ ವಿಧಿಯಲ್ಲಿ ದತ್ತವಾಗಿರುವ ಅಧಿಕಾರ ಬಳಕೆ ಮಾಡಿಕೊಂಡು ರಾಜ್ಯಪಾಲರು 14 ವರ್ಷ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯನ್ನು ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಲು ಸಾಧ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ. ಅದಕ್ಕಾಗಿ ಅವರು ರಾಜ್ಯ ಸಂಪುಟದ ಸಲಹೆ ಕೇಳಬಹುದಾಗಿದೆ.

ಇದರಿಂದಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರನ್ನು ಬಿಗಡೆ ಮಾಡುವ ಅಧಿಕಾರ ರಾಜ್ಯಪಾಲರಿಗೇ ಹೊರತು, ಸರ್ಕಾರಕ್ಕಲ್ಲ. ಅವಧಿ ಪೂರ್ವ ಬಿಡುಗಡೆ ಎಂದಾದರೆ, ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next