Advertisement

ರಾಜ್ಯಪಾಲರ ನೇಮಕ: ಡಿಎಚ್‌ಎಸ್‌ಗೆ ಸಿಗದ ಅವಕಾಶ

07:00 AM Oct 01, 2017 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಮತ್ತೆ ಐವರು ರಾಜ್ಯಪಾಲರನ್ನು ನೇಮಕ ಮಾಡಿದ್ದು,ರಾಜ್ಯಪಾಲರ ಹುದ್ದೆ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರಿಗೆ ಮತ್ತೆ ಅವಕಾಶ ಕೈತಪ್ಪಿದೆ.

Advertisement

ಶಂಕರಮೂರ್ತಿ ಅವರು ರಾಜ್ಯಪಾಲ ರಾಗಲಿದ್ದಾರೆ ಎಂಬ ಮಾತು ಕಳೆದ ಐದು ವರ್ಷಗಳಿಂದ ಕೇಳಿಬರುತ್ತಿತ್ತು. ಅದರಲ್ಲೂ 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಬಾರಿ ರಾಜ್ಯಪಾಲರ ನೇಮಕ ಸಂದರ್ಭದಲ್ಲೂ ಶಂಕರಮೂರ್ತಿ ಅವರ ಹೆಸರು ಕೇಳಿಬರುತ್ತಿತ್ತಾದರೂ ಅಂತಿಮ ಹಂತದಲ್ಲಿ ಅವಕಾಶ ವಂಚಿತರಾಗುತ್ತಿದ್ದರು.
ಇತ್ತೀಚೆಗೆ ಮತ್ತೆ ರಾಜ್ಯಪಾಲರ ನೇಮಕದ ಮಾತು ಕೇಳಿಬಂದಾಗ ಶಂಕರಮೂರ್ತಿ ಅವರ ಹೆಸರು ಕೇಳಿಬಂದಿತ್ತು. ಅದರಲ್ಲೂ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಕ್ಕೆ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗುತ್ತದೆ ಎಂದು ಊಹಾಪೋಹ ಸೃಷ್ಟಿಯಾಗಿತ್ತು. ಇದೀಗ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆಯಾದರೂ ಅದರಲ್ಲಿ ಶಂಕರಮೂರ್ತಿ ಅವರ ಹೆಸರು ಇರಲಿಲ್ಲ.

ಆದರೆ, ತೆಲಂಗಾಣ-ಆಂಧ್ರಪ್ರದೇಶಕ್ಕೆ ರಾಜ್ಯಪಾಲರನ್ನು ನೇಮಕ ಮಾಡದ ಕಾರಣ ಶಂಕರಮೂರ್ತಿ ಅವರು ಇನ್ನೂ ರಾಜ್ಯಪಾಲ ರಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡುವ ಸಂದರ್ಭದಲ್ಲಿ ತಮಗೆ ಅವಕಾಶ ಸಿಗದ ಬಗ್ಗೆ ಶಂಕರಮೂರ್ತಿ ಅವರಿಗೆ ನಿರಾಶೆಯಾಗಿದೆ ಎನ್ನಲಾಗಿದ್ದು, ಇನ್ನೂ ಅವಕಾಶವಿದೆ. ಕಾದು ನೋಡೋಣ ಎಂದು ಆಪ್ತರ ಬಳಿ ಹೇಳಿಕೊಂಡಿರುವುದಾಗಿ  ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next