Advertisement

ಗವರ್ನರ್‌ ಅಧಿಕಾರ: ಬೊಮ್ಮಾಯಿ ತೀರ್ಪು ಅನುಸರಿಸಲು ನಿರ್ಧಾರ

03:50 AM Apr 11, 2017 | Team Udayavani |

ಹೊಸದಿಲ್ಲಿ: ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿ ಹುಟ್ಟಿರುವ ಗೊಂದಲಗಳ ನಿವಾರಣೆಗೆ ಎಸ್‌.ಆರ್‌. ಬೊಮ್ಮಾಯಿ ತೀರ್ಪನ್ನು ಅನುಸರಿಸಲು ಅಂತಾರಾಜ್ಯ ಮಂಡಳಿ ಸ್ಥಾಯಿ ಸಮಿತಿ ನಿರ್ಧರಿಸಿದೆ. 

Advertisement

12 ವರ್ಷಗಳ ಬಳಿಕ ರವಿವಾರ ಸಭೆ ನಡೆಸಿದ ಸ್ಥಾಯಿ ಸಮಿತಿಯು, ಮುಖ್ಯ ಮಂತ್ರಿಗಳ ನೇಮಕ, ರಾಜ್ಯ ವಿಧಾನಸಭೆ ಗಳಲ್ಲಿ ಅಂಗೀಕಾರಗೊಂಡ ವಿಧೇಯಕ ಗಳಿಗೆ ನೀಡುವ ಒಪ್ಪಿಗೆ ಸೇರಿದಂತೆ ರಾಜ್ಯಪಾಲ ರಿಗಿರುವ ವಿಶೇಷಾಧಿಕಾರಗಳ ಕುರಿತು ಚರ್ಚಿಸಿದ್ದಾರೆ. ಸಚಿವ ರಾಜನಾಥ್‌ಸಿಂಗ್‌ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಈಗಾಗಲೇ ಬೊಮ್ಮಾಯಿ ಪ್ರಕರಣದಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ತೀರ್ಪನ್ನು ಮತ್ತು ಎಂ ಎಂ ಪಂಚಿ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಿದರಾಯ್ತು ಎನ್ನುವ ನಿರ್ಧಾರಕ್ಕೆ ಸಭೆಯಲ್ಲಿದ್ದವರು ಬಂದಿದ್ದಾರೆ. ಗೋವಾ, ಮಣಿಪುರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಬಿಜೆಪಿ ಸರಕಾರ ರಚಿಸಿರುವುದು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿ ಕೆಲ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಸರಕಾರ ವಿಶ್ವಾಸ ಕಳೆದುಕೊಂಡಿದೆ ಎಂಬ ಶಂಕೆ ಮೂಡಿದರೆ, ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವುದೇ ಅದಕ್ಕೆ ಪರಿಹಾರ ಎಂದು ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next