Advertisement

ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲರು ಗರಂ

09:00 PM Feb 19, 2022 | Team Udayavani |

ತಿರುವನಂತಪುರಂ: ಕೇರಳ ರಾಜ್ಯಪಾಲರಾಗಿರುವ ಆರಿಫ್ ಮೊಹಮದ್‌ ಖಾನ್‌, ಕೇರಳದ ಪಿಣರಾಯಿ ವಿಜಯನ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Advertisement

“ಸರ್ಕಾರ ಎಲ್ಲ ಸಚಿವರ ವೈಯಕ್ತಿಯ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಕೊಡುತ್ತಿದೆ. ಒಬ್ಬೊಬ್ಬ ಸಚಿವರು 20-20 ಜನರನ್ನು ಸಿಬ್ಬಂದಿಯಾಗಿಸಿಕೊಂಡಿದ್ದಾರೆ. ಈ ಬಗ್ಗೆ ನಾನು ಸರ್ಕಾರಕ್ಕೆ ಈ ಪದ್ಧತಿ ತೆಗೆದುಹಾಕಿ, ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಸಲು ಹೇಳಿದ್ದೇನೆ.

ಸರ್ಕಾರ ನನ್ನ ಮಾತು ಕೇಳಲಿಲ್ಲವೆಂದರೆ ನಾನು ಬಿಡುವವನೂ ಅಲ್ಲ. ಇಲ್ಲಿ ನಾನು ಸರ್ಕಾರವನ್ನು ಸಂವಿಧಾನ ಪ್ರಕಾರ ನಡೆದುಕೊಳ್ಳುವಂತೆ ನೋಡಿಕೊಳ್ಳುವುದಕ್ಕೇ ಇರುವವನು. ಸರ್ಕಾರಕ್ಕೆ ರಾಜ ಭವನವನ್ನು ನಿಯಂತ್ರಿಸುವ ಹಕ್ಕಿಲ್ಲ’ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next