Advertisement

ಸರ್ಕಾರ ಯೂಟರ್ನ್: 362 ಗೆಜೆಟೆಡ್‌ ಪ್ರೊಬೆಷನರಿಗಳ ನೇಮಕಕ್ಕೆ ಅಸ್ತು

03:50 AM Mar 02, 2017 | Team Udayavani |

ಬೆಂಗಳೂರು: ತೀವ್ರ ವಿವಾದ ಮೂಡಿಸಿದ್ದ 2011ರ ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಗೊಂಡ 362 ಅಭ್ಯರ್ಥಿಗಳಿಗೆ ರಾಜ್ಯ ಸರಕಾರ “ಯುಗಾದಿ’ ಕೊಡುಗೆ ಕೊಟ್ಟಿದ್ದು, ನೇಮಕಾತಿ ಕುರಿತ ಕೆಎಟಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಿದೆ.

Advertisement

ಬುಧವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ನೇಮಕಾತಿ ನಿರೀಕ್ಷೆಯಲ್ಲಿದ್ದ 362 ಅಭ್ಯರ್ಥಿಗಳು ನಿಟ್ಟು ಸಿರು ಬಿಡುವಂತಾಗಿದೆ. ಸಂಪುಟ ಸಭೆಯ  ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯ ಚಂದ್ರ, 2011ರ 362  ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂಬಂಧ ಕೆಎಟಿ ತೀರ್ಪಿನ  ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಸಂಪುಟ ತೀರ್ಮಾನಿಸಿದೆ. ಆದರೆ ಬೇರೆ ಅಭ್ಯರ್ಥಿಗಳು ಬೇಕಾದರೆ ಮೇಲ್ಮನವಿ ಸಲ್ಲಿಸಬಹುದು ಎಂದು  ಅವರು ಸ್ಪಷ್ಟಪಡಿಸಿದರು. ಸಂಪುಟದಲ್ಲಿ  ಈ ಕುರಿತು ಸುದೀರ್ಘ‌ ಚರ್ಚೆ ನಡೆದು ಸಿಐಡಿ ತನಿಖೆ, ಕಾನೂನು ಇಲಾಖೆ ಅಭಿಪ್ರಾಯ, ನೇಮಕಗೊಂಡ ಅಭ್ಯರ್ಥಿಗಳ ಬಗ್ಗೆ ಮನವಿ, ಖಾಲಿ ಹುದ್ದೆ ಭರ್ತಿಯ ಅನಿವಾರ್ಯ ಕುರಿತೂ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬರ ಲಾಗಿದೆ. 362 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ತತ್‌ಕ್ಷಣದಿಂದಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಹರ್ಷ: ರಾಜ್ಯ ಸಚಿವ ಸಂಪುಟದಲ್ಲಿ 2011ರ ಗೆಜೆಟೆಡ್‌ ಪ್ರೊಬೆಷ ನರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೆಎಟಿ ತೀರ್ಪಿಗೆ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಿದ್ದರಿಂದ ಹರ್ಷ ಗೊಂಡ ಅಭ್ಯರ್ಥಿಗಳು ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯ ಚಂದ್ರ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ವಿಧಾನಸೌಧಕ್ಕೆ ನಿಯೋಗದಲ್ಲಿ ಬಂದಿದ್ದ ಅಭ್ಯರ್ಥಿಗಳು, ನಮ್ಮ ಹೋರಾಟಕ್ಕೆ ಜಯ ಸಂದಂತಾಗಿದೆ. ಸರಕಾರವು ಇಂತಹ ತೀರ್ಮಾನ ಕೈಗೊಂಡಿ ರುವುದು ಸಂತಸ ತಂದಿದೆ ಎಂದರು.

2011ರ ಕೆಎಎಸ್‌ ಗೆಜೆಟೆಡ್‌ 
ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರಕಾರ ಯೂ ಟರ್ನ್ ಹೊಡೆದಿದೆ. ಈ ದ್ವಂದ್ವ ನೀತಿಯ ಬಗ್ಗೆ ಸರಕಾರವೇ ಉತ್ತರಿಸಬೇಕು. ಅವರಿಗೆ ನೇಮಕಾತಿ ಆದೇಶ ನೀಡಬೇಕಿದ್ದರೆ, 362 ಜನರ ನೇಮಕಾತಿ ಸರಿಯಿಲ್ಲ ಎಂದು 2011 ರ ಅಧಿಸೂಚನೆಯನ್ನು ವಾಪಸ್‌ ಪಡೆಯುವ ಅಗತ್ಯವೇನಿತ್ತು. ಈಗ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆಯೂ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ.
ಸುರೇಶ್‌ಕುಮಾರ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next