Advertisement

SC: ಸಣ್ಣ ಪುಟ್ಟ ವಿಚಾರಕ್ಕೆಲ್ಲ ಸರಕಾರಿ ಅಧಿಕಾರಿಗಳಿಗೆ ಸಮನ್ಸ್‌ ಬೇಡ: ಸುಪ್ರೀಂ

11:49 PM Jan 03, 2024 | Team Udayavani |

ಹೊಸದಿಲ್ಲಿ: ಸರಕಾರಿ ನೌಕರರಿಗೆ ಕೋರ್ಟ್‌ಗಳು ಜಾರಿ ಮಾಡುವ ಸಮನ್ಸ್‌ ಕುರಿತಾಗಿ ಸುಪ್ರೀಂ ಕೋರ್ಟ್‌ ಬುಧವಾರ ಮಾರ್ಗಸೂಚಿ ಹೊರಡಿಸಿದೆ. ಸಣ್ಣಪುಟ್ಟ ವಿಚಾರಕ್ಕೆಲ್ಲ ಸಮನ್ಸ್‌ ಜಾರಿ ಮಾಡಬೇಕಾಗಿಲ್ಲ ಎಂದೂ ತಿಳಿಸಿದ್ದು, ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲ ಹೈಕೋರ್ಟ್‌ಗಳಿಗೂ ಸೂಚಿಸಿದೆ.

Advertisement

ಕೇವಲ ಅಫಿದವಿತ್‌ ಸಲ್ಲಿಸಿ ಇತ್ಯರ್ಥಪಡಿಸುವ ವಿಚಾರಗಳಿ­ದ್ದರೆ, ಸಮನ್ಸ್‌ ನೀಡಬೇಕಾಗಿಲ್ಲ, ನ್ಯಾಯಾಲಯಗಳು ಸರಕಾರಿ ನೌಕರರು ಧರಿಸಿರುವ ಬಟ್ಟೆಯನ್ನು ನೋಡಿಕೊಂಡು ಅವರಿಗೆ ಅವಮಾನವಾಗುವಂತೆ ಟೀಕೆ ಮಾಡಬಾರದು, ಸರಕಾರಿ ಇಲಾಖೆಗಳಲ್ಲಿ ನಿಗದಿಪಡಿಸಿದ ವಸ್ತ್ರಸಂಹಿತೆಯನ್ನು ಮೀರುವಂಥ ಉಡುಗೆ ತೊಟ್ಟಿದ್ದರೆ ಮಾತ್ರ ಆಕ್ಷೇಪ ಮಾಡಬಹುದು. ಅಭಿಪ್ರಾಯಭೇದವಿದೆ ಎಂಬ ಕಾರಣಕ್ಕೆ ಸಮನ್ಸ್‌ ನೀಡುವುದು ಸರಿಯಲ್ಲ, ಹಾಜರಾಗುವಂತೆ ಸೂಚಿಸುವುದಿದ್ದರೂ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗುವುದಕ್ಕೆ ಆದ್ಯತೆ ನೀಡಬಹುದು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಸರಕಾರಿ ಅಧಿಕಾರಿಯೊಬ್ಬರಿಗೆ ಕೋರ್ಟ್‌ ನಿಂದ ಸಮನ್ಸ್‌ ಜಾರಿಯಾದ ಪ್ರಕರಣದ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್‌ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next