Advertisement

ಮೈತ್ರಿ ಸರ್ಕಾರ ಹೆಚ್ಚು ದಿನ ಬಾಳಲ್ಲ;ಇದು ನನ್ನ ಮಾತಲ್ಲ: ಬಿಎಸ್‌ವೈ 

12:14 PM Sep 02, 2018 | |

ಮುಧೋಳ: ಕಾಂಗ್ರೆಸ್‌ , ಜೆಡಿಎಸ್‌ ನೊಳಗಿನ ಕಚ್ಚಾಟ, ಹೊಡೆದಾಟ ನೋಡಿದರೆ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ. ಈ ಮಾತು ನಾನು ಹೇಳುತ್ತಿಲ್ಲ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಾಯಕರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. 

Advertisement

ಬಾಗಲಕೋಟೆಯ ಮುಧೋಳದಲ್ಲಿರುವ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಸರಕಾದ ನೂರು ದಿನದ ಸಾಧನೆ ಎಂದರೆ ವರ್ಗಾವಣೆ ದಂಧೆ ಎಂದರು. 

ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರ ವಿಚಾರ ಪ್ರಸ್ತಾವಿಸಿದ ಅವರು ಕಾಂಗ್ರೆಸ್‌ ವಿದ್ಯಮಾನಗಳನ್ನು ಗಮನಿಸಿದರೆ ಹೆಚ್ಚು ದಿನ ಸರ್ಕಾರ ಉಳಿಯುವುದಿಲ್ಲ .ಕಾಂಗ್ರೆಸ್‌ನಲ್ಲಿ ಎಲ್ಲವೂ ಗೊಂದಲಮಯವಾಗಿದೆ, ಎಲ್ಲವೂ ಸರಿಯಿಲ್ಲ ಎಂದರು. 

ಸಿದ್ದರಾಮಯ್ಯ ಅವರು ಲೋಕಸಭೆಗೆ ಎಲ್ಲಿಂದ ಸ್ಪರ್ಧಿಸಿದರೂ ಏನೂ ವ್ಯತ್ಯಾಸವಾಗುವುದಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next