Advertisement

ಎಲ್‌ಟಿಸಿ ನಗದು ವಿಸ್ತರಣೆ

12:05 AM Oct 31, 2020 | mahesh |

ಹೊಸದಿಲ್ಲಿ: ಜನರ ಕೈಯಲ್ಲಿ ಹಣದ ಹರಿವು ಹೆಚ್ಚಿ ಖರೀದಿ ವೃದ್ಧಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಪ್ರವಾಸಿ ರಜೆ ಭತ್ತೆ (ಎಲ್‌ಟಿಸಿ) ನಗದೀಕರಣ ಸೌಲಭ್ಯವನ್ನು ಎಲ್ಲ ರಾಜ್ಯ ಸರಕಾರಿ ಉದ್ಯೋಗಿಗಳಿಗೂ ವಿಸ್ತರಿಸಿದೆ.

Advertisement

ಅಷ್ಟೇ ಅಲ್ಲ, ಖಾಸಗಿ ಉದ್ಯೋಗಿಗಳಿಗೂ ಅನ್ವಯವಾಗಲಿದೆ ಎಂದೂ ತಿಳಿಸಿದೆ. ಈ ಯೋಜನೆ ಅಡಿ ಪ್ರತೀ ನೌಕರನಿಗೆ ಗರಿಷ್ಠ 36 ಸಾವಿರ ರೂ. ವರೆಗೆ ನಗದು ಭತ್ತೆ ಸಿಗಲಿದೆ. ಈ ಯೋಜನೆ 2018-19ನೇ ಸಾಲಿನಿಂದಲೇ ಅನ್ವಯವಾಗಲಿದೆ.

ಈ ಎಲ್‌ಟಿಸಿ ನಗದಿಗೆ ತೆರಿಗೆ ಇರುವುದಿಲ್ಲ. ಷರತ್ತುಗಳಿದ್ದು, ಪಡೆಯುವ ಎಲ್‌ಟಿಸಿ ನಗದಿನ 3 ಪಟ್ಟು ಹೆಚ್ಚು ಹಣವನ್ನು ಸರಕು ಮತ್ತು ಸೇವೆಗಳ ಖರೀದಿಗಾಗಿ ವ್ಯಯಿಸಿದರೆ ಶೇ. 12ರಷ್ಟು ಜಿಎಸ್‌ಟಿಯಿಂದ ವಿನಾಯಿತಿ ದೊರೆಯುತ್ತದೆ.

ಯಾರಿಗೆಲ್ಲ ಅನ್ವಯ?
1. ಕೇಂದ್ರ ಸರಕಾರಿ ನೌಕರರು
2. ರಾಜ್ಯ ಸರಕಾರಿ ನೌಕರರು
3. ಸರಕಾರಿ ಸಂಸ್ಥೆಗಳ ನೌಕರರು
4. ಖಾಸಗಿ ಉದ್ಯೋಗಿಗಳು

Advertisement

Udayavani is now on Telegram. Click here to join our channel and stay updated with the latest news.

Next