Advertisement

Hebri: ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸರಕಾರಿ ಬಸ್‌ ಸಿಬಂದಿ

01:01 AM Oct 02, 2024 | Team Udayavani |

ಹೆಬ್ರಿ: ಆಗುಂಬೆಯಿಂದ ಹೆಬ್ರಿಯತ್ತ ಬರುತ್ತಿದ್ದ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸ್ವಸ್ಥ ಗೊಂಡ ಯುವತಿಯೋರ್ವಳನ್ನು ಬಸ್‌ ಸಿಬಂದಿ ನೇರವಾಗಿ ಹೆಬ್ರಿಯ ಸರಕಾರಿ ಸಮುದಾಯ ಕೇಂದ್ರಕ್ಕೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸೆ. 30ರಂದು ಸಂಜೆ ನಡೆದಿದೆ.

Advertisement

ಸುರಕ್ಷಾ ಎಂಬ ಯುವತಿ ಮೇಗರವಳ್ಳಿಯಲ್ಲಿ ಬಸ್‌ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ಬಸ್‌ ಇಳಿಯುವ ವೇಳೆ ತೀವ್ರ ಅಸ್ವಸ್ಥ
ಗೊಂಡ ಯುವತಿಯನ್ನು ಗಮನಿಸಿದ ಬಸ್‌ ನಿರ್ವಾಹಕ ವಾಸಿಮ್‌ ದೇಸಾಯಿ ಘಾಟಿ ಇಳಿಯುತ್ತಿದ್ದಂತೆ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಬಸ್‌ ಸಹಿತ ಕರೆದುಕೊಂಡು ಹೋದರು. ಅಲ್ಲಿ ಯುವತಿ ಯಾವುದೇ ರೀತಿ ಚೇತರಿಸಿಕೊಳ್ಳದ ಕಾರಣ ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ತೋರಿಸಿದ್ದಾರೆ.

ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಹೋಗುವಂತೆ ತಿಳಿಸಿದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯನ್ನು ತತ್‌ಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಬಸ್‌ ಚಾಲಕ ತಾರೇಶ್‌ ಹಾಗೂ ನಿರ್ವಾಹಕ ವಾಸಿಮ್‌ ದೇಸಾಯಿ ಅವರ ಸಮಯ ಪ್ರಜ್ಞೆಯಿಂದ ಯುವತಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸ್ಪಂದಿಸದ ಸಹ ಪ್ರಯಾಣಿಕರು
ತೀವ್ರ ಅಸ್ವಸ್ಥ ಗೊಂಡ ಯುವತಿಯ ಸಹಾಯಕ್ಕೆ ಹತ್ತಿರದಲ್ಲಿದ್ದ ಮಹಿಳೆಯರಲ್ಲಿ ವಿನಂತಿಸಿದಾಗ ಸ್ಪಂದಿಸಲಿಲ್ಲ. ದೂರದಲ್ಲಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬರು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೆಬ್ರಿ ಪೊಲೀಸರು ಕೂಡ ಸೋಮೇಶ್ವರದಿಂದ ಹೆಬ್ರಿಯ ಆಸ್ಪತ್ರೆಯ ತನಕ ಝೀರೋ ಟ್ರಾಪಿಕ್‌ ವ್ಯವಸ್ಥೆ ನೀಡಿ ಸಹಕಾರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next