Advertisement

ಆಶಾ ಕಾರ್ಯಕರ್ತೆಯರಿಗೆ ಶೀಘ್ರವೇ ದಿನಸಿ ಕಿಟ್‌

06:55 AM May 24, 2020 | Team Udayavani |

ಕೋಲಾರ: ಕೊವಿಡ್‌ -19 ನಿಯಂತ್ರಣ ಮಂಚೂಣಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವ ರೆಡ್‌ಕ್ರಾಸ್‌ ಜಿಲ್ಲಾ ಘಟಕದಿಂದ ಆಶಾ ಕಾರ್ಯಕರ್ತೆಯರೆಲ್ಲರಿಗೂ ದಿನಸಿ ಕಿಟ್‌ ವಿತರಣೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮಂಗಳವಾರ ಚಾಲನೆ  ನೀಡಲಾಗುವುದು ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣಗೌಡ ತಿಳಿಸಿದರು.

Advertisement

ನಗರದ ಇಟಿಸಿಎಂ ಆಸ್ಪತ್ರೆಗೆ ಶನಿವಾರ ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ 10 ಪಿಪಿಇ ಕಿಟ್‌ ಹಾಗೂ ಸಿಬ್ಬಂದಿಗೆ ದಿನಸಿ ಹಾಗೂ ಮಾಸ್ಕ್ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಇಟಿಸಿಎಂ ಆಸ್ಪತ್ರೆಯು ನೂರಕ್ಕೂ ಹೆಚ್ಚು ವರ್ಷಗಳಿಂದ ಆರೋಗ್ಯ ಸೇವೆ ಯಲ್ಲಿದ್ದು, ಇಲ್ಲಿನ ವೈದ್ಯರ ಹಿತದೃಷ್ಟಿಯಿಂದ ಹಾಗೂ ಕೊವಿಡ್‌-19 ಚಿಕಿತ್ಸೆಗೆ ನೆರವಾಗುವಂತೆ  ಪಿಪಿಇ ಕಿಟ್‌  ನೀಡಲಾಗುತ್ತಿದೆ ಎಂದರು.

ಇಟಿಸಿಎಂ ಆಸ್ಪತ್ರೆ ಮುಖ್ಯಸ್ಥ ಜಾನ್ಸನ್‌ ಮಾತನಾಡಿ, ಕೊರೊನಾ ಆತಂಕದಲ್ಲಿಯೂ ಇಟಿಸಿಎಂ ಆಸ್ಪತ್ರೆಯಲ್ಲಿ ಕೋಲಾರ ಜಿಲ್ಲೆಯ ಜನತೆಗೆ ಆರೋಗ್ಯ ಸೇವೆಯನ್ನು ನಿರಾಂತಕವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್‌ -19 ಚಿಕಿತ್ಸೆಗೂ ಸ್ವಯಂ ಪ್ರೇರಿತವಾಗಿ 5 ಬೆಡ್‌ ನಿಗದಿಪಡಿಸಲಾಗಿದೆ, ರೆಡ್‌ಕ್ರಾಸ್‌ ಸಂಸ್ಥೆ ನೀಡುತ್ತಿರುವ ಪಿಪಿಇ ಕಿಟ್‌ಗಳು ಜನರ ಆರೋಗ್ಯ ಸೇವೆಗೆ ಸಹಕಾರಿಯಾಗಲಿದೆಯೆಂದರು.

ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ ಫಾದರ್‌ ಶಾಂತಕುಮಾರ್‌, ರೆಡ್‌ಕ್ರಾಸ್‌ ಕಾರ್ಯದರ್ಶಿ ವಿ.ಪಿ.ಸೋಮಶೇಖರ್‌ ಮಾತನಾಡಿದರು. ಇಟಿಸಿಎಂ ನರ್ಸಿಂಗ್‌ ಶಾಲಾ ಪ್ರಾಂಶುಪಾಲರಾದ ರೋಸ್‌ ಮೇರಿ, ರೆಡ್‌ಕ್ರಾಸ್‌ ಸಂಸ್ಥೆಯ ಪದಾಧಿಕಾರಿಗಳಾದ ಎಸ್‌.ನಾಗಶೇಖರ್‌, ಜಿ.  ಶ್ರೀನಿವಾಸ್‌, ಆರ್‌.ಶ್ರೀನಿವಾಸನ್‌, ಸದಸ್ಯ ರಾದ ಡಾ.ಚಿದಾನಂದ, ಎನ್‌. ಶ್ರೀರಾಮರೆಡ್ಡಿ, ಶ್ರೀನಿವಾಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next