Advertisement

ಕೋವಿಡ್ ವಾರಿಯರ್ಸ್ ಗೆ ಗೌರವ ನೀಡಿ

06:47 PM May 22, 2020 | Naveen |

ಗೊರೇಬಾಳ: ಕೋವಿಡ್‌-19 ನಿಯಂತ್ರಣದಲ್ಲಿ ಪೊಲೀಸ್‌, ಆರೋಗ್ಯ, ಕಂದಾಯ, ನಗರಸಭೆ, ಗ್ರಾಪಂ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಗೌರವಿಸಬೇಕಾಗಿದೆ ಎಂದು ಜಿಪಂ ಸದಸ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ ಹೇಳಿದರು.

Advertisement

ಬಾದರ್ಲಿ ಮತ್ತು ರಾಗಲಪರ್ವಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವೈದ್ಯರು, ಕಿರಿಯ ಆರೋಗ್ಯ ಸಹಾಯಕಿಯರಿಗೆ ಸನ್ಮಾನ ಹಾಗೂ ಆಶಾ ಕಾರ್ಯಕರ್ತರಿಗೆ ಬಿಜೆಪಿಯಿಂದ ಕಿಟ್‌ ವಿತರಿಸಿ ಅವರು ಮಾತನಾಡಿದರು. ಕೋವಿಡ್ ವಾರಿಯರ್ಗೆ ಸನ್ಮಾನ ಹಾಗೂ ಸಹಾಯ ಸಹಕಾರ ನೀಡಬೇಕು ಎನ್ನುವುದು ಪಕ್ಷದ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಿಂಧನೂರು ನಗರ ಹಾಗೂ ಎಲ್ಲ ಜಿಪಂ ವ್ಯಾಪ್ತಿಯಲ್ಲಿ ತಾವು ಮಾಡುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಾ| ತರುಣಕುಮಾರ, ಅಜಯಕುಮಾರ ಪವಾರ, ಡಾ| ವಿಶ್ವನಾಥ ಜಾಧವ, ಮುಖಂಡರಾದ ದೇವೇಂದ್ರಗೌಡ ಯಾಪಲಪರ್ವಿ, ಶರಣೇಗೌಡ ಪೋಲಿಸ್‌ಪಾಟೀಲ, ಜಡಿಯಪ್ಪ ವಕೀಲ, ಮಲ್ಲಿಕಾರ್ಜುನ ಜೀನೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next