Advertisement

ಗೋರಖ್‌ಪುರ ಮಕ್ಕಳ ಸಾವು; ಡಾ.ಕಾಫಿಲ್‌ ಖಾನ್‌ ಬಂಧನ 

10:04 AM Sep 02, 2017 | |

ಗೋರಖ್‌ಪುರ: ಇಲ್ಲಿನ ಬಾಬಾ ರಾಘವ ದಾಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶಿಶುಗಳ ನಿರಂತರ ಸಾವಿಗೆ ಸಂಬಂಧಿಸಿ ಆಸ್ಪತ್ರೆಯ ವೈದ್ಯ ಡಾ. ಕಾಫಿಲ್‌ ಖಾನ್‌ ಅವರನ್ನು ಶನಿವಾರ ಉತ್ತರಪ್ರದೇಶದ ಎಸ್‌ಟಿಎಫ್ ಬಂಧಿಸಿದೆ. ನೋಡಲ್‌ ಅಧಿಕಾರಿಯಾಗಿದ್ದ ಖಾನ್‌ ಅವರನ್ನು ಈಗಾಗಲೇ ಹುದ್ದೆಯಿಂದ ವಜಾ ಮಾಡಲಾಗಿತ್ತು. 

Advertisement

ಶುಕ್ರವಾರ ಶಿಶುಗಳ ಸಾವಿಗೆ ಸಂಬಂಧಿಸಿ ಗೋರ್‌ಖ್‌ಪುರ ಹೈಕೋರ್ಟ್‌ ಕಾಫಿಲ್‌ ಖಾನ್‌ ಸೇರಿದಂತೆ 7 ಮಂದಿ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. 

ವೈದ್ಯರಾದ ಡಾ.ಸತೀಶ್‌, ಡಾ.ಗಜಾನನ್‌ ಜೈಸ್ವಾಲ್‌, ಲೆಕ್ಕಾಧಿಕಾರಿ ಸುಧೀರ್‌ ಪಾಂಡೆ , ಸಹಾಯಕ ಗುಮಾಸ್ತ ಸಂಜಯ್‌ ಕುಮಾರ್‌ ತ್ರಿಪಾಠಿ ,ಆಕ್ಸಿಜನ್‌ ಸರಬರಾಜು ಮಾಡುತ್ತಿದ್ದ ಉದಯ್‌ ಪ್ರತಾಪ್‌ ಸಿಂಗ್‌ ಮತ್ತು ಮನೀಷ್‌ ಭಂಡಾರಿ ಅವರ ವಿರುದ್ದ ವಾರಂಟ್‌ ಹೊರಡಿಸಲಾಗಿತ್ತು. 

ವಾರದ ಒಳಗೆ 70 ಮಕ್ಕಳ ಸಾವಿನಿಂದ ಆಸ್ಪತ್ರೆ ಭಾರೀ ಸುದ್ದಿಯಾಗಿದ್ದು, ಆ ಬಳಿಕ ಪ್ರಸಕ್ತ ವರ್ಷವೊಂದರಲ್ಲೇ ಸಾವಿರಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು ಎನ್ನುವುದು ಬೆಳಕಿಗೆ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next