Advertisement

ಪೈವಳಿಕೆ ಮುಖ್ಯ ಶಿಕ್ಷಕಿಗೆ ವಿದಾಯಕೂಟ

01:00 AM Mar 08, 2019 | Team Udayavani |

ಕುಂಬಳೆ: ಪೈವಳಿಕೆನಗರ ಸರಕಾರಿ ಹೈ, ಸೆಕೆಂಡರಿ ವಿದ್ಯಾಲಯದಲ್ಲಿ ನಿವೃತ್ತರಾಗುತ್ತಿರುವ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಪಿ. ಅವರಿಗೆ ವಿದಾಯಕೂಟ ಜರಗಿತು. 

Advertisement

ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ವಿಶ್ವನಾಥ ಕುಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಕೆ. ಅವರಿಗೆ ಹಾರಾರ್ಪಣೆಗೈದು ಉಂಗುರ ತೊಡಿಸಿದರು. ನಿವೃತ್ತ ಶಿಕ್ಷಣ ಉಪನಿರ್ದೇಶಕ ಶ್ರೀನಿವಾಸ ಕೆ ಶಾಲು ಹೊದೆಸಿ ಸ್ಮರಣಿಕೆ, ದೀಪ, ಸಮ್ಮಾನಪತ್ರ, ಫಲಪುಷ್ಪ ನೀಡಿ ಸಮ್ಮಾನಿಸಿದರು. 

ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಇಬ್ರಾಹೀಂ ಪಾವಲುಕೋಡಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಮಾತƒ ಸಂಘದ ಅಧ್ಯಕ್ಷೆ ರೋಹಿಣಿ ಶಾಲು ಹೊದೆಸಿ ದರು. ಪೈವಳಿಕೆ ಕ್ರೆಸೆಂಟ್‌ ನ್ಪೋರ್ಟ್ಸ್ ಕ್ಲಬ್‌ನ ಅಬ್ದುಲ್‌ ರಹಿಮಾನ್‌ ಪೈವಳಿಕೆ ಸ್ಮರಣಿಕೆ ನೀಡಿ ಗೌರವಿಸಿದರು. ರವೀಂದ್ರನಾಥ್‌ ಕೆ ಆರ್‌, ಲಾರೆನ್ಸ್‌ ಡಿ’ಸೋಜಾ, ಅಬ್ದುಲ್ಲ ಹಾಜಿ, ಅಬ್ದುಲ್‌ ಲತೀಫ್‌, ಮುಜಿಬುಲ್‌ ರಹಿಮಾನ್‌, ಶಂಕರನಾರಾಯಣ ಭಟ್‌ ಬೀಡುಬೆ„ಲು, ಕೆ ಎಂ. ಬಲ್ಲಾಳ್‌, ರಾಧಾಕೃಷ್ಣ ಮಾಸ್ತರ್‌ ಕಾಯರ್‌ಕಟ್ಟೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್‌ ಪೈವಳಿಕೆ ಮಾತನಾಡಿದರು. ಶಾಲಾ ನೌಕರರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಎಂ ಎಸ್‌ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ಕೆ. ವಂದಿಸಿದರು. ಸುಮಿತ್ರಾ ಕೆ. ಪ್ರಾರ್ಥನೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next