Advertisement

ಶಿರೂರಲ್ಲಿ ಉತ್ತಮ ಪ್ರತಿಕ್ರಿಯೆ

09:29 PM Jan 09, 2022 | Team Udayavani |

ಶಿರೂರ: ಓಮಿಕ್ರಾನ್‌ ಭೀತಿಯ ಹಿನ್ನೆಲೆಯಲ್ಲಿ ವೀಕೆಂಡ್‌ ಕರ್ಫ್ಯೂವಿನ ಶನಿವಾರದ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಕರ್ಫ್ಯೂ ಬಗ್ಗೆ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿತ್ತು.

Advertisement

ಶನಿವಾರ ಬೆಳಗ್ಗೆ ಪಪಂ ಮುಖ್ಯಾ ಧಿಕಾರಿ ಐ.ಜಿ. ಕೊಣ್ಣೂರ,ಯು.ಜಿ. ವರದಪ್ಪನವರ, ಜಿ.ಜಿ. ಹಿರೇಮಠ, ಎಂ.ಟಿ. ಪೊಲೀಸ್‌ ಪಾಟೀಲ, ಸಿಬ್ಬಂದಿ ಪಟ್ಟಣದಲ್ಲಿ ಸಂಚರಿಸಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಿ, ಕರ್ಫ್ಯೂಗೆ ಬೆಂಬಲ ನೀಡಿ ಕೊರೊನಾ ತೊಲಗಿಸಲು ಸಹಕರಿಸಲು ವಿನಂತಿಸಿದರು. ಪಟ್ಟಣದಲ್ಲೂ ಸಹ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು.

ಹಾಲು, ಔಷ ಧಿ ಅಂಗಡಿ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಮೇಲೆ ಸರಕಾರಿ ವಾಹನಗಳ ಸಂಚಾರ ಹೆಚ್ಚು ಕಂಡು ಬಂದರೆ, ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು, ವೀಕೆಂಡ್‌ ಕರ್ಫ್ಯೂ ನಡುವೆಯೂ ಮಹಿಳೆಯರು ಚಕ್ಕಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ತೆರಳಿದರು. ಶಿರೂರರಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಪಪಂ ರದ್ದು ಮಾಡಿದೆ. ನೀಲಾನಗರ, ಬೆನಕಟ್ಟಿ, ಗುಂಡನಪಲ್ಲೆ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವೀಕೆಂಡ್‌ ಕರ್ಫ್ಯೂಗೆ ಸೂಕ್ತ ಬೆಂಬಲ ವ್ಯಕ್ತವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next