Advertisement

ಎತ್ತುಗಳ ಜಾತ್ರೆಗೆ ರೈತರಿಂದ ಉತ್ತಮ ಸ್ಪಂದನೆ

02:44 PM Apr 05, 2022 | Team Udayavani |

ಜಗಳೂರು: ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡದಗುಡ್ಡದಲ್ಲಿ ನಡೆದ ಎತ್ತುಗಳ ಜಾತ್ರೆಯಲ್ಲಿ ಎತ್ತುಗಳ ಮಾರಾಟಕ್ಕೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Advertisement

ಬೆಲೆ ಅಧಿಕವಾದರೂ ರೈತರು ವ್ಯವಸಾಯಕ್ಕೆ ಸೂಕ್ತವಾದ ಎತ್ತುಗಳನ್ನು ಖರೀದಿಸಿದರು. ಕೊಡದಗುಡ್ಡ ಗ್ರಾಮದಲ್ಲಿ ವೀರಭದ್ರಸ್ವಾಮಿಯ ರಥೋತ್ಸವದ ನಂತರ ಎತ್ತುಗಳ ಜಾತ್ರೆ ನಡೆಯುವುದು ವಾಡಿಕೆ. ಈ ಜಾತ್ರೆಗೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿಜಯನಗರ, ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳಿಂದ ವ್ಯಾಪಾರಸ್ಥರು ಆಗಮಿಸಿ ವ್ಯಾಪಾರ ವಹಿವಾಟು ಮಾಡಿದರು.

ಕೊರೊನಾ ಹಿನ್ನಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಎತ್ತುಗಳ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಈ ಬಾರಿ ಕೋವಿಡ್‌ ನಿಯಮಗಳು ಸಡಿಲಗೊಂಡ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಸಾವಿರಾರು ಜೋಡಿ ಎತ್ತುಗಳು ಮಾರಾಟವಾದವು. ಒಂದು ಜೊತೆ ಎತ್ತುಗಳಿಗೆ 60 ಸಾವಿರದಿಂದ 1.80 ಲಕ್ಷ ರೂ.ವರೆಗೆ ದರ ನಿಗದಿಯಾಗಿತ್ತು.

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವ್ಯವಸಾಯಕ್ಕೆ ಎತ್ತುಗಳೇ ಸೂಕ್ತ. ಬಿತ್ತನೆ ಮಾಡುವಾಗ ಮತ್ತು ಕಟಾವು ಮಾಡಿದ ಬೆಳೆಯನ್ನು ತುಳಿಸುವಾಗ ಎತ್ತುಗಳು ಬೇಕೆ ಬೇಕು. ಅಲ್ಲದೆ ಮನೆಯ ಮುಂದೆ ಎತ್ತುಗಳಿದ್ದರೆ ಅದರ ಸೊಗಸೇ ಬೇರೆ ಎನ್ನುತ್ತಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next