Advertisement

ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆ: ಸಂತಸದಲ್ಲಿ ರೈತಾಪಿ ವರ್ಗ

10:26 AM Jun 03, 2021 | Team Udayavani |

ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ಭರ್ತಿಯಾಗಿ ಹರಿದಿವೆ.

Advertisement

ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಗಳು ಆರ್ಭಟಿಸುತ್ತಿವೆ. ಮಳೆಯ ಆರ್ಭಟ ಹಾಗೂ ಕೋವಿಡ್ ಕರಿ ನೆರಳ ಮಧ್ಯೆಯೂ ರೈತಾಪಿ ಜನತೆ ಕೃಷಿ ಚಟುವಟಿಕೆಯಲ್ಲಿ ಖುಷಿಯಿಂದಲೇ ತೊಡಗಿದ್ದಾರೆ‌.

ಇದನ್ನೂ ಓದಿ:14 ಲಕ್ಷ ರೂ ಮೌಲ್ಯದ ಅನಧಿಕೃತ ಬೀಜ ಸಂಗ್ರಹ: ಕೃಷಿ ಅಧಿಕಾರಿಗಳಿಂದ ದಾಳಿ

ರೈತರು ಈಗಾಗಲೇ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡುತ್ತಿದ್ದು ಬಿತ್ತನೆಗೆ ಸಿದ್ದವಾಗಿದ್ದಾರೆ. ಕೆಲ ರೈತರು ಈಗಾಗಲೇ ಬಿತ್ತನೆಯಲ್ಲೂ ತೊಡಗಿದ್ದಾರೆ.

Advertisement

ಒಂದೆಡೆ ಕೋವಿಡ್ ಆರ್ಭಟಕ್ಕೆ ಬೆಚ್ಚಿರುವ ರೈತರು ಇತ್ತ ಉತ್ತಮ ಮಳೆಯ ಆರ್ಭಟಕ್ಕೆ ಖುಷಿಯಿಂದಲೇ ಕೃಷಿಯತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು:ಸರಕಾರಿ ಕಚೇರಿಯಲ್ಲಿ’ರಾಣಿ’ಯಾಗಿ ಮೆರೆದ ಶ್ವಾನ! 11 ವರ್ಷದ ಒಡನಾಟಕ್ಕೆ ಕಣ್ಣೀರವಿದಾಯ

Advertisement

Udayavani is now on Telegram. Click here to join our channel and stay updated with the latest news.

Next