Advertisement

ಉತ್ತಮ ಮಳೆ: ಮುಂಗಾರು ಬಿತ್ತನೆಗೆ ರೈತ ಸಜ್ಜು

10:10 AM Jun 16, 2019 | Team Udayavani |

ರಾಂಪುರ: ಗ್ರಾಮದ ರಾಂಪುರ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಲು ಮುಂದಾಗಿರುವ ರೈತರು, ಮತ್ತೂಂದು ಮಳೆಗಾಗಿ ಹಾತೊರೆಯುತ್ತಿದ್ದಾರೆ.

Advertisement

ರಾಂಪುರ, ಬೇವೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಸಣ್ಣ ಮತ್ತು ಅತೀ ಸಣ್ಣ ರೈತರು ಸದಾ ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಲುಕಿ ಪರದಾಡಿದ್ದಾರೆ. ಈಚೆಗೆ ಸುರಿದ ಮಳೆಯಿಂದ ಅನ್ನದಾತರು ನಿಟ್ಟಿಸಿರು ಬಿಟ್ಟಿದ್ದಾರೆೆ. ಮಳೆರಾಯನ ಮುನಿಸಿನಿಂದ ರೈತರಲ್ಲಿ ಅಡಗಿರುವ ಆತಂಕ ಕೊಂಚ ದೂರಾಗಿದೆ. ಮುಂಗಾರು ಹಂಗಾಮಿನ ಮಳೆ ಇನ್ನಷ್ಟು ಉತ್ತಮವಾಗಿ ಸುರಿಯುವ ಆಶಾಭಾವನೆಯಿಂದ ಬಿತ್ತನೆ ಬೀಜ ಪಡೆಯಲು ಮುಗಿಬಿದ್ದಿದ್ದಾರೆ.

ಬೀಜಗಳ ದಾಸ್ತಾನು: ರೈತರಿಗೆ ಬೀಜ ಪೂರೈಸಲು ರಾಂಪುರ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಕಾಳು ಬೀಜ 65 ಕೆಜಿ, ತೊಗರಿ 6 ಕೆಜಿ. ಗೋವಿನ ಜೋಳ 1800 ಕೆಜಿ. ಸಜ್ಜೆ 215 ಕೆಜಿ. ಸೂರ್ಯಕಾಂತಿ 330 ಕೆಜಿ ದಾಸ್ತಾನು ಇದೆ. ಅದರಂತೆ ಹೆಸರು ಕಾಳು 3 ಕ್ವಿಂಟಲ್, ತೊಗರಿ 3 ಕ್ವಿಂಟಲ್ ಬೇಡಿಕೆ ಪಟ್ಟಿಯನ್ನು ಇಲಾಖೆಗೆ ಕಳಿಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಎ.ಬಿ. ಒಂಟಿ ತಿಳಿಸಿದ್ದಾರೆ.

ಅಲ್ಲಲ್ಲಿ ಮಳೆ: ಸುತ್ತಲಿನ ಗ್ರಾಮದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ, ಇನ್ನಷ್ಟು ಮಳೆಯಾಗುವ ಲಕ್ಷಣ ಕಂಡು ಬರುತ್ತಿರುವ ಹಿನ್ನೆಲೆಯಿಂದ ಹರ್ಷಿತರಾದ ರೈತರು ಹೆಸರು, ಸಜ್ಜೆ, ಮತ್ತಿತರ ಬಿತ್ತನೆ ಬೀಜ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ರೈತರಿಗೆ ಅನಕೂಲವಾಗಲೆಂದು ಸಾಕಷ್ಟು ದಿನಗಳ ಮುಂಚೆಯೆ ಎಲ್ಲ ಬೀಜಗಳ ದಾಸ್ತಾನು ಮಾಡಲಾಗಿತ್ತು. ಆದರೆ ಮಳೆಯಾಗದೇ ಇದ್ದುದರಿಂದ ರೈತರು ಬೀಜ ಖರೀದಿಗೆ ಹಿಂದೇಟು ಹಾಕಿದರು. ಎರಡು ದಿನದಿಂದ ಮಳೆಯ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಎಲ್ಲ ರೈತರು ಒಮ್ಮಲೇ ಬೀಜ ಖರೀದಿಗೆ ಬರುತ್ತಿರುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next