Advertisement

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

08:17 PM Sep 20, 2024 | Team Udayavani |

ಚಿಕ್ಕಮಗಳೂರು: ದೇವರ ಹುಂಡಿಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡು, ಹುಡುಗಿ ಪ್ರೀತಿಸುವಂತೆ ಮಾಡು, ಆಸ್ತಿ, ದುಡ್ಡು ಸಿಗು ವಂತೆ ಮಾಡು ಎಂಬ ಪತ್ರಗಳನ್ನು ಬರೆದು ಹಾಕಿರುವುದುನ್ನು ಇದುವರೆಗೂ ನೋಡಿದ್ದೇವೆ ಕೇಳಿದ್ದೇವೆ. ಆದರೆ, ಇದೇ ಮೊದಲ ಬಾರೀಗೆ ದೇವರ ಹುಂಡಿಗೆ ಹಿಂದುತ್ವ ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಹುಂಡಿಗೆ ಪತ್ರ ಬರೆದು ಹಾಕಿರುವುದು ಕಂಡು ಬಂದಿದೆ.

Advertisement

ಹಿಂದೂ ಮಹಾಸಭಾದಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ಹುಂಡಿಯಲ್ಲಿ ಈ ಪತ್ರಗಳು ಲಭ್ಯವಾಗಿವೆ. ಪತ್ರದಲ್ಲಿ ಭಾರತ ದೇಶ ಸಂಪೂರ್ಣ ಹಿಂದೂರಾಷ್ಟçವಾಗಬೇಕು. ದೇಶದ ೧೪೦ ಕೋಟಿ ಜನರು ಹಿಂದೂಗಳಾಗಬೇಕು. ಸಿ.ಟಿ.ರವಿ ಮುಂದಿನ ಸಿ.ಎಂ ಆಗಬೇಕು ಎಂದು ಬರೆಯಲಾಗಿದೆ.

ಜತೆಗೆ ಈದ್ ಮಿಲಾದ್ ಮೆರವಣಿಗೆಗಿಂತ ಹಿಂದೂಗಳು ನಡೆಸುವ ಮೆರವಣಿಗೆ ಜೋರಾಗಬೇಕು. ಹಿಂದೂಗಳು ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು. ನನ್ನ ಮಗನಿಗೆ ಮದುವೆ ಮಾಡು ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ ಎಂದು ಬರೆದು ಪತ್ರವನ್ನು ಹುಂಡಿಗೆ ಹಾಕಲಾಗಿದೆ. ಸೆ.18 ರಂದು ಗಣಪತಿ ವಿಸರ್ಜನೆ ಬಳಿಕ ಇಂದು ಹುಂಡಿ ಯನ್ನು ತೆರೆದಿದ್ದು, ಪತ್ರ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next