Advertisement
ಉಡುಪಿಯಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೌಕಾ ಪಡೆಯ ಹಡಗಿನ ತಳಕ್ಕೆ ಹಾನಿಯಾಗಿರುವ ಸಮಯ, ಸುವರ್ಣ ತ್ರಿಭುಜದ ಸಂಪರ್ಕ ಕಡಿತ ಆಗಿರುವ ಸಮಯ ಇತ್ಯಾದಿಗಳ ಬಗ್ಗೆ ಸಂಶಯಗಳಿವೆ. ಹುಡುಕಾಟದ ವೇಳೆ ನೌಕಾಪಡೆಗೆ ಸಾಗರ ತಳದಲ್ಲಿ 23 ಮೀ. ಉದ್ದದ ಬೋಟೊಂದು ಕಂಡು ಬಂದಿದೆ. ಆದರೆ ಆಳದಲ್ಲಿ ಇರುವುದರಿಂದ ಸ್ಪಷ್ಟವಾಗಿ ಗೋಚರವಾಗಿಲ್ಲ. ಈ ಹಿಂದೆ ಯಾವತ್ತೋ ಮುಳುಗಿದ್ದ ಬೋಟಿನ ಅವಶೇಷವೋ ಎಂಬುದೂ ದೃಢವಾಗಿಲ್ಲ. ಸುವರ್ಣ ತ್ರಿಭುಜ ಬೋಟ್ 24 ಮೀಟರ್ ಇರುವುದರಿಂದ ಅದಕ್ಕೂ ಇದಕ್ಕೂ ತಾಳೆಯಾಗುವುದಿಲ್ಲ. ಸರಿಯಾದ ಪರಿಶೀಲನೆ ನಡೆಸಿದಾಗ ನಮ್ಮ ಎಲ್ಲ ಸಂಶಯಕ್ಕೆ ಪರಿಹಾರ ಸಿಗಲಿದೆ ಎಂದರು.
ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂಬ ಹಲವು ವಂದತಿಗಳು ಎಲ್ಲೆಡೆ ಹರಡುತ್ತಿವೆ. ನಾಪತ್ತೆಯಾದವರ ಕುಟುಂಬದವರು ಈಗಲೂ ಅವರು ಬರುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ವದಂತಿಗಳು ಸತ್ಯವಾಗಲಿ ಎನ್ನುವುದು ನಮ್ಮ ಆಸೆ ಎಂದು ಡಾ| ಜಯಮಾಲಾ ತಿಳಿಸಿದರು. ಬೋಟ್ ಡಿ. 13 ರಂದು ರಾತ್ರಿ 11 ಗಂಟೆಗೆ ಮಲ್ಪೆ ಬಂದರಿನಿಂದ ಮೀನು ಗಾರಿಕೆಗೆ ತೆರಳಿತ್ತು. ಡಿ. 15ರ ತಡರಾತ್ರಿ ವರೆಗೆ ಮನೆ ಮಂದಿಯ ಜತೆ ಮೀನುಗಾರರು ಸಂಪರ್ಕದಲ್ಲಿದ್ದರು. ಅನಂತರ ಮೊಬೈಲ್ ಸಂಪರ್ಕ ಕಡಿದು ಕೊಂಡಿತ್ತು. ಬೋಟ್ನಲ್ಲಿ ಉಡುಪಿಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರು ಇದ್ದರು.