Advertisement

Ayodhya; ರಾಮಲಲ್ಲಾನಿಗೆ ಚಿನ್ನದ ಎಳೆಗಳ ವಸ್ತ್ರ

10:16 PM Dec 10, 2023 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ದಿನದಂದು ಪುಣೆಯಲ್ಲಿ ನೇಯ್ಗೆ ಮಾಡಲಾಗುವ ಚಿನ್ನದ ವಸ್ತ್ರ ಬಳಕೆ ಮಾಡಲಾಗುತ್ತದೆ. ಅದಕ್ಕಾಗಿ ಭಾನುವಾರದಿಂದ ಕೆಲಸವೂ ಶುರುವಾಗಿದೆ.

Advertisement

ರಾಮ ಮಂದಿರ ಟ್ರಸ್ಟ್‌ನ ಅಧಿಕಾರಿ ಗೋವಿಂದ್‌ ದೇವ್‌ ಗಿರಿ ನೀಡಿರುವ ಮಾಹಿತಿಗಳ ಪ್ರಕಾರ, ಪ್ರಾಣ ಪ್ರತಿಷ್ಠಾಪನೆಯ ದಿನದಂದು ರಾಮ ಧರಿಸುವ ಬಟ್ಟೆ ವಿಶೇಷವಾಗಿರಲಿದೆ. ಅದು ಚಿನ್ನದ ಎಳೆಗಳಿಂದ ನೇಯ್ದಿರುವುದು ಮಾತ್ರವಲ್ಲದೆ, ಸಾರ್ವಜನಿಕರೇ ನೇಯ್ಗೆ ಮಾಡುವುದು ಮತ್ತೂಂದು ವಿಶೇಷ.

ದೇಶದ ಪ್ರತಿಯೊಂದು ರಾಜ್ಯದಿಂದಲೂ ಕೈಮಗ್ಗದಲ್ಲಿ ನೇಯ್ದಿರುವ ವಸ್ತ್ರಗಳನ್ನು ಹಾಗೂ ಅವುಗಳಿಗೆ ಒಪ್ಪುವ ಚಿನ್ನದ ಎಳೆಗಳನ್ನು ಪುಣೆಗೆ ತಂದು 13 ದಿನಗಳ ಅಭಿಯಾನ ಆರಂಭಿಸಲಾಗಿದೆ. ಅದರಲ್ಲಿ ಸಾರ್ವಜನಿಕರೆಲ್ಲರೂ ಭಾಗಿಯಾಗಿ, ವಸ್ತ್ರಗಳ ಮೇಲೆ ಚಿನ್ನದ ಎಳೆಗಳ ನೇಯ್ಗೆ ಹಾಕುವಲ್ಲಿ ಕೈ ಜೋಡಿಸುತ್ತಿದ್ದಾರೆ. ಡಿ.22ಕ್ಕೆ ವಸ್ತ್ರಗಳು ಸಿದ್ದಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next