Advertisement

ಸಂಭ್ರಮದ ತೋಪಿನ ಗೊಲ್ಲಾಳಮ್ಮ ದೇವಿ ಜಾತ್ರೆ

11:59 AM Feb 22, 2019 | |

ಧರ್ಮಪುರ: ಇಲ್ಲಿನ ತೋಪಿನ ಗೊಲ್ಲಾಳಮ್ಮ ದೇವಿ ಜಾತ್ರೆ ಸಡಗರ ಸಭ್ರಮದಿಂದ ಜರುಗಿತು. ಗೊಲ್ಲಾಳಮ್ಮ ದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿ ವಿವಿಧ ಪೂಜಾ ಕೈಕಂರ್ಯಗಳು ನೆರವೇರಿದವು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅರತಿ ಸೇವೆ, ಉಂಡೆ, ಮಂಡೆ, ಬೇವಿನ ಸೀರೆ ತೊಟ್ಟು ಹರಕೆ ತೀರಿಸಿದರು. ಭಕ್ತರಿಗೆ ಸಕಲ ಸೌಲಭ್ಯವನ್ನು ದೇವಸ್ಥಾನ ಕಮಿಟಿ ಒದಗಿಸಿತ್ತು. ಯಾವುದೇ ತೊಂದರೆ ಆಗದಂತೆ ಪೊಲೀಸರು ಬಿಗಿಬಂದೋಬಸ್ತ್ ಒದಗಿಸಿದ್ದರು.

Advertisement

ಯಾದವ ನಂದ ಸ್ವಾಮೀಜಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್‌, ಮಾಜಿ ಸಚಿವ ಡಿ. ಸುಧಾಕರ್‌, ಚಿತ್ರದುರ್ಗ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಮಾಜಿ ಸಂಸದ ಜನಾರ್ದನ ಸ್ವಾಮಿ ಇತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next