Advertisement

ನಮ್ಮ ಕ್ರಿಕೆಟನ್ನು ದೇವರೇ ಕಾಪಾಡಬೇಕು!

01:08 AM Aug 08, 2019 | Sriram |

ಹೊಸದಿಲ್ಲಿ: ಭಾರತ ಕ್ರಿಕೆಟನ್ನು ದೇವರೇ ಕಾಪಾಡಬೇಕು…. ಹೀಗೆಂದು ಉದ್ಘಾರ ತೆಗೆದದ್ದು ಭಾರತದ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ಇತ್ತೀಚೆ ಗಷ್ಟೇ ಆಯ್ಕೆಯಾಗಿರುವ ದ್ರಾವಿಡ್‌ಗೆ ಬಿಸಿಸಿಐ ನೈತಿಕ ಅಧಿಕಾರಿ ಸ್ವಹಿತಾಸಕ್ತಿ ಸಂಘರ್ಷದಡಿ ನೋಟಿಸ್‌ ನೀಡಿದ್ದನ್ನು ವಿರೋಧಿಸಿ ಗಂಗೂಲಿ ಹೀಗೆ ಟ್ವೀಟ್‌ ಮಾಡಿದ್ದಾರೆ.

Advertisement

ಕಳೆದ ತಿಂಗಳು ದ್ರಾವಿಡ್‌ ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ಭಾರತ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತ ದ್ರಾವಿಡ್‌ಗೆ ಸ್ವಹಿತಾಸಕ್ತಿ ಸಮಸ್ಯೆಯಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜಯ್‌ ಗುಪ್ತ ದೂರು ನೀಡಿದ್ದರು. ಇದನ್ನು ಆಧಾರಿಸಿ ಬಿಸಿಸಿಐ ನೋಟಿಸ್‌ ನೀಡಿದೆ.

ದ್ರಾವಿಡ್‌ ಅವರನ್ನು ಎನ್‌ಸಿಎ ಮುಖ್ಯಸ್ಥರಾಗಿ ನೇಮಿಸಿದ್ದೇ ಬಿಸಿಸಿಐ. ಆಗಲೇ ಬಿಸಿಸಿಐಗೆ ದ್ರಾವಿಡ್‌, ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷ ರಾಗಿದ್ದರು ಎನ್ನುವುದು ಗೊತ್ತಿತ್ತು. ಅವರಿಗೇ ಸ್ವಹಿತಾಸಕ್ತಿ ಆರೋಪದಡಿ ನೋಟಿಸ್‌ ನೀಡಲಾಗಿದೆ.

ಗಂಗೂಲಿ ಹೇಳಿದ್ದೇನು?
“ಭಾರತದ ಕ್ರಿಕೆಟ್‌ನಲ್ಲಿ ಈಗ ಹೊಸ ಅಲೆ ಶುರುವಾಗಿದೆ… ಸ್ವಹಿತಾಸಕ್ತಿ ಸಂಘರ್ಷ. ಸುದ್ದಿಯಲ್ಲಿ ಉಳಿಯಲು ಅತ್ಯುತ್ತಮ ಮಾರ್ಗ. ಭಾರತ ಕ್ರಿಕೆಟನ್ನು ದೇವರೇ ಕಾಪಾಡಬೇಕು. ಈಗ ದ್ರಾವಿ ಡ್‌ಗೂ ಸ್ವಹಿತಾಸಕ್ತಿ ಸಂಘರ್ಷದಡಿ ನೋಟಿಸ್‌ ನೀಡÇಗಿದೆ’ ಎಂದು ಗಂಗೂಲಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next