Advertisement

ದೇವರೇ ನಿಜ ಹೇಳಿಸಿದ್ದಾನೆ: ಜಮೀರ್‌

07:35 AM Jul 24, 2017 | Team Udayavani |

ತುಮಕೂರು:”ಜೆಡಿಎಸ್‌ನಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇರುವುದು ನಿಜ. ನಾವು ಯಾರಾದರೂ ಇದನ್ನು ಹೇಳಿದ್ದರೆ
ಜನ ನಂಬುತ್ತಿರಲಿಲ್ಲ. ಆ ದೇವರೇ ಪ್ರಜ್ವಲ್‌ ರೇವಣ್ಣ ಅವರ ಬಾಯಿಂದ ನಿಜ ಹೇಳಿಸಿದ್ದಾನೆ.

Advertisement

ಸೂಟ್‌ಕೇಸ್‌ ತೆಗೆದುಕೊಳ್ಳುತ್ತಿದ್ದರು ನಾವು ಎಂದು ನಮ್ಮ ಮೇಲೆ ಕುಮಾರಸ್ವಾಮಿ ಗೂಬೆ ಕೂರಿಸಿದ್ದರು. ಯಾರು ಸೂಟ್‌ ಕೇಸ್‌ ತೆಗೆದುಕೊಳ್ಳುತ್ತಿದ್ದರು ಎನ್ನುವುದಕ್ಕೆ ಸಿಬಿಐ ತನಿಖೆ ನಡೆಯಲಿ. ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಾರಾ?’

ಹೀಗೆಂದು ಗುಡುಗಿದ್ದು ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ಖಾನ್‌. ಭಾನುವಾರ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಜಿಲ್ಲೆಗೆ ಭೇಟಿ ನೀಡಿದ್ದ ಜಮೀರ್‌, ಸುದ್ದಿಗಾರರೊಂದಿಗೆ ಮಾತನಾಡಿ, ರಾಜೀವ್‌ ಚಂದ್ರಶೇಖರ್‌, ಎಂ.ಎಂ.ರಾಮಸ್ವಾಮಿ, ವಿಜಯಮಲ್ಯ, ಕುಪೇಂದ್ರರೆಡ್ಡಿ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಯಾರು ಸೂಟ್‌ ಕೇಸ್‌ ಪಡೆದಿದ್ದರು ಅಂತ ಹೇಳಲಿ. ಈ ಬಗ್ಗೆ ಸಿಬಿಐ ತನಿಖೆಗೆ ನಾವು ರೆಡಿ, ಕುಮಾರಸ್ವಾಮಿ ಸಿದ್ಧನಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next