Advertisement

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

01:38 PM Sep 30, 2023 | Team Udayavani |

ಪಣಜಿ: ನಾನು ಯಾವುದೇ ಹುದ್ದೆಯನ್ನು ಹುಡುಕುತ್ತಿಲ್ಲ, ಆದರೆ ನಾನು ಗೋವಾದಲ್ಲಿ ಮಹದಾಯಿ, ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಸ್ಥಳೀಯ ಸಮಸ್ಯೆಗಳಿಗೆ ಹೋರಾಟ ಅಗತ್ಯ ಎಂದು ವಕೀಲರಾದ ಪ್ರತಿಮಾ ಕುತಿನ್ಹೊ ಅಭಿಪ್ರಾಯಪಟ್ಟಿದ್ದಾರೆ.

Advertisement

ಪಣಜಿಯಲ್ಲಿ ಸ್ಥಳೀಯ ಸುದ್ಧಿವಾಹಿನಿಯೊಂದಿಗೆ ಮಾತನಾಡಿದ ಅವರು- “ನಾನು ಆಮ್ ಆದ್ಮಿ ಪಾರ್ಟಿಯಲ್ಲಿದ್ದಾಗ ಅವರು ನನ್ನನ್ನು ಗೌರವದಿಂದ ನಡೆಸಿಕೊಂಡರು, ಆದರೆ ನಾನು ಅಲ್ಲಿ ಸಂತೋಷವಾಗಿರಲಿಲ್ಲ” ಎಂದು ಕುಟಿನ್ಹೋ ಹೇಳಿದರು. ನನಗೆ ಒಳಗೊಳಗೆ ಬೇಸರವಾಯಿತು. ಹಾಗಾಗಿ ನನ್ನ ಮನದಾಳದ ಮಾತು ಕೇಳಿ ಆಮ್ ಆದ್ಮಿ ಪಕ್ಷ ತ್ಯಜಿಸಿದ್ದೇನೆ. ನಾನು ಯಾವ ಪಕ್ಷದವನೆಂಬ ಕಾರಣದಿಂದಲ್ಲ.. ನನ್ನ ಕೆಲಸದಿಂದ ಜನ ನನ್ನನ್ನು ತಿಳಿದಿದ್ದಾರೆ ಎಂದು ಪ್ರತಿಮಾ ಕುತಿನ್ಹೊ ನುಡಿದರು.

ನಾನು ಯಾವುದೇ ಹುದ್ಧೆಗೂ ಆಸೆಪಟ್ಟವಳಲ್ಲ. ನಾನು ಗೋವಾದಲ್ಲಿ ಮಹದಾಯಿ ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ, ಇದಕ್ಕಾಗಿ ನನ್ನ ಮನದಾಳದ ಮಾತು ಕೇಳಿ ಆಮ್ ಆದ್ಮಿ ಪಕ್ಷ ತ್ಯಜಿಸಿದೆ ಎಂದು ಪ್ರತಿಮಾ ಕುತಿನ್ಹೊ ಹೇಳಿದರು.

ಇದನ್ನೂ ಓದಿ: Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next