Advertisement

ಗಣಿಗಾರಿಕೆ ಪುನರಾರಂಭಗೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ:ಶ್ರೀಪಾದ ನಾಯ್ಕ

01:33 PM Sep 01, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಗೊಳ್ಳಬೇಕು. ಇದಕ್ಕೆ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಕರಣ ಅತ್ಯರ್ಥವಾಗಬೇಕು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಲು ಮುಂದಾಗಿರುವ ಖನಿಜ ಮಹಾಮಂಡಳ ಸ್ಥಾಪನೆಯಾಗಬೇಕು, ಗಣಿಗಾರಿಕೆ ಪುನರಾರಂಭಗೊಳ್ಳಲು ಇವು ಎರಡೇ ಮಾರ್ಗವಿದೆ. ಗಣಿಗಾರಿಕೆ ಪುನರಾರಂಭಗೊಳ್ಳಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು- ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವು ಒಂದು ಸಚಿವ ಸಮೀತಿಯನ್ನು ಸ್ಥಾಪಿಸಿದೆ. ಇತ್ತೀಚೆಗಷ್ಟೇ ನಡೆದ ಈ ಸಮೀತಿಯ ಸಭೆಯಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಉಪಸ್ಥಿತರಿದ್ದರು ಎಂದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ಮಾಹಿತಿ ನೀಡಿದರು.

ಗೋವಾದಲ್ಲಿ ಗಣಿಗಾರಿಕೆ ಪುನರಾರಂಭಿಸಲು ಗಣಿ ನಿಯಮ, ಖಾಯ್ದೆಯ ತಿದ್ಧುಪಡಿ ಮಾಡಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ಟೀಕೆಯನ್ನು ಮಾಡಲಾಗುತ್ತಿದೆ. ಯಾವುದೇ ಕಾಯ್ದೆಯನ್ನು ಒಂದು ರಾಜ್ಯಕ್ಕಾಗಿ ತಿದ್ದುಪಡಿ ಮಾಡಲಾಗುವುದಿಲ್ಲ. ಖಾಯ್ದೆ ತಿದ್ದುಪಡಿ ಮಾಡಿದರೆ ಇತರ ರಾಜ್ಯಗಳ ಗಣಿಗಾರಿಕೆ ಮೇಲೆ ಯಾವ ಪರಿಣಾಮವಾಗಲಿದೆ ಎಂಬುದನ್ನು ಕೂಡ ಕೇಂದ್ರ ಸರ್ಕಾರ ವಿಚಾರ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next