Advertisement

ಮದುವೆಯಾದ 1 ವರ್ಷಕ್ಕೆ ಪತ್ನಿಯನ್ನು ಕೊಂದು ಅಪಘಾತ ಎಂದು ಬಿಂಬಿಸಿದ ಗೋವಾದ ಹೋಟೆಲ್ ಮ್ಯಾನೇಜರ್

10:46 AM Jan 21, 2024 | Team Udayavani |

ಪಣಜಿ: ಹೆಂಡತಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಂಡು ಬಳಿಕ ಅಪಘಾತವೆಂದು ಬಿಂಬಿಸಿದ ದಕ್ಷಿಣ ಗೋವಾದ ಐಷಾರಾಮಿ ಹೋಟೆಲ್‌ನ ಮ್ಯಾನೇಜರ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಗೌರವ್ ಕಟಿಯಾರ್ ಎಂದು ಗುರುತಿಸಲಾಗಿದೆ.

Advertisement

ಏನಿದು ಪ್ರಕರಣ: ಗೌರವ್ ಕಟಿಯಾರ್ ಅವರು ದಕ್ಷಿಣ ಗೋವಾದ ಕೊಲ್ವಾದಲ್ಲಿ ಮ್ಯಾರಿಯಟ್ ಇಂಟರ್ನ್ಯಾಷನಲ್ ನಿರ್ವಹಿಸುತ್ತಿರುವ ಐಷಾರಾಮಿ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ನೋ ಮೂಲದ ಗೌರವ್ ಗೆ ಸುಮಾರು ಒಂದು ವರ್ಷದ ಹಿಂದೆ ದೀಕ್ಷಾ ಗಂಗ್ವಾರ್ ಅವರ ಜೊತೆ ವಿವಾಹವಾಗಿತ್ತು ಆದರೆ ಇದರ ನಡುವೆ ಗೌರವ್ ಗೆ ಬೇರೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ ಆದರೆ ಮದುವೆಯ ಬಳಿಕ ಪತ್ನಿ ತನ್ನ ಸಂಬಂಧಕ್ಕೆ ಅಡ್ಡ ಬರುತ್ತಾಳೆ ಎಂದು ಭಾವಿಸಿ ಆಕೆಯ ಹತ್ಯೆಗೆ ಸಂಚು ರೂಪಿಸಿ ಅದರಂತೆ ಕಳೆದ ಶುಕ್ರವಾರ ಪತ್ನಿ ಜೊತೆ ಗೋವಾ ಸಮುದ್ರದಲ್ಲಿ ಈಜಾಡಲು ತೆರಳಿದ್ದಾರೆ ಈ ವೇಳೆ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದು ಹಿಂತಿರುಗಿದ್ದಾನೆ.

ಇದನ್ನು ಕಂಡ ಅಲ್ಲಿನ ಸ್ಥಳೀಯರು ಬೀಚ್ ಗೆ ಹೋಗುವಾಗ ಜೊತೆಯಾಗಿ ಹೋಗಿದ್ದು ವಾಪಸ್ಸು ಬರುವಾಗ ಒಬ್ಬಂಟಿಯಾಗಿ ಹಿಂತಿರುತ್ತಿದ್ದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದಾದ ಬಳಿಕ ಶುಕ್ರವಾರ ಸಂಜೆ ಪತ್ನಿ ದೀಕ್ಷಾ ಗಂಗ್ವಾರ್ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಬಂದ ಪೊಲೀಸರ ತನಿಖೆ ವೇಳೆ ದೀಕ್ಷಾ ಅವರ ಪತಿ ಮನೆಯಲ್ಲಿ ನನಗೆ ಗೊತ್ತಿಲ್ಲದ ವೇಳೆ ಆಕೆ ಸಮುದ್ರದಲ್ಲಿ ಈಜಾಡಲು ಹೋಗಿ ಅವಘಡ ಸಂಭವಿಸಿದೆ ಎಂದು ಹೇಳಿದ್ದಾನೆ ಆದರೆ ಇದನ್ನು ಅಲ್ಲಗಳೆದ ಅಲ್ಲಿನ ನಿವಾಸಿಗಳು ಇಬ್ಬರು ಜೊತೆಯಾಗಿ ಸಮುದ್ರಕ್ಕೆ ತೆರಳುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ ಬಳಿಕ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯ ಹೊರಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಇದನ್ನೂ ಓದಿ: Rashmika Mandanna: ಡೀಪ್‌ ಫೇಕ್‌ ಮಾಡಿದಾತನ ಬಂಧನ; ನಟಿ ರಶ್ಮಿಕಾ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next