Advertisement

ಪ್ರವಾಸೋದ್ಯಮ ಅಭಿವೃದ್ಧಿ: ಉಡುಪಿಗೆ ಶೀಘ್ರ ಗೋವಾ ಸಿಎಂ: ರಘುಪತಿ ಭಟ್‌

10:41 AM Jun 24, 2019 | Team Udayavani |

ಉಡುಪಿ: ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉಡುಪಿ ಜಿಲ್ಲೆಯಲ್ಲಿ ಸಾಧಿಸುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಶೀಘ್ರವೇ ಉಡುಪಿಗೆ ಆಗಮಿಸಲಿದ್ದಾರೆ.

Advertisement

ಗೋವಾದಲ್ಲಿ ಮುಖ್ಯಮಂತ್ರಿಯವರನ್ನು ಕಂಡು ಭೇಟಿ ಮಾಡಿದ ಶಾಸಕ ಕೆ. ರಘುಪತಿ ಭಟ್‌ ಅವರು ಮಾಡಿದ ಮನವಿ ಮೇರೆಗೆ ಅವರು ಉಡುಪಿಗೆ ಭೇಟಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಈಗ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಾರೆ. ಅವರನ್ನು ಅಲ್ಲಿನ ಬಳಿಕ ಉಡುಪಿಯತ್ತ ಕರೆಯಲು ಬೇಕಾದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಇಲ್ಲಿ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎರಡೂ ಸರಕಾರಗಳ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಮುಖ್ಯಮಂತ್ರಿಯವರು ಆ. 15ರ ಬಳಿಕ ಉಡುಪಿಗೆ ಬರುವುದಾಗಿ ಹೇಳಿದ್ದಾರೆಂದು ಭಟ್‌ “ಉದಯವಾಣಿ’ಗೆ ತಿಳಿಸಿದರು.

ಮೀನುಗಾರರು ಮೀನುಗಾರಿಕೆಗೆ ತೆರಳಿದಾಗ ಕೆಲವು ಸಮಸ್ಯೆಗಳಾಗುತ್ತವೆ. ಇವುಗಳನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ಕೇಳಿದಾಗ ಸಹಕಾರ ಕೊಡುವುದಾಗಿ ಮುಖ್ಯಮಂತ್ರಿ ತಿಳಿಸಿದರು. ವರ್ಷದ ಹಿಂದೆ ಮೀನುಗಾರಿಕಾ ಬೋಟಿನ ಸಮಸ್ಯೆಯಾದಾಗ ಆಗಿನ ಮುಖ್ಯಮಂತ್ರಿ ಪಾರಿಕ್ಕರ್‌ಗೆ ಆರೋಗ್ಯ ಸರಿ ಇಲ್ಲದಿದ್ದಾಗ ಸ್ಪೀಕರ್‌ ಆಗಿದ್ದ ಪ್ರಮೋದ್‌ ಸಾವಂತ್‌ ಅವರು ಸಹಕಾರ ನೀಡಿದ್ದರೆಂದು ಭಟ್‌ ಸ್ಮರಿಸಿಕೊಂಡರು. ಉಡುಪಿ ಪ್ರಸಾದ್‌ ನೇತ್ರಾಲಯದ ಮುಖ್ಯಸ್ಥ ಡಾ| ಕೃಷ್ಣಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next