Advertisement

LS polls 2024: “ಕಮಲದಳ’ ಮೈತ್ರಿಗೆ ಗೋವಾ ಸಿಎಂ ಕಾರಣ: ಕುಮಾರಸ್ವಾಮಿ

08:21 PM Apr 04, 2024 | Team Udayavani |

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕಾರಣ. ಈ ಮೈತ್ರಿ ಹೀಗೆ ಮುಂದುವರಿಯಲಿದ್ದು, ಕಾಂಗ್ರೆಸ್‌ ಅನ್ನು ಪ್ರತಿ ಚುನಾವಣೆಯಲ್ಲಿ ಸೋಲಿಸಲಿದೆ ಎಂದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಗುಟ್ಟನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದರು.

Advertisement

ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯ ಶಕ್ತಿ ಕೊಟ್ಟ ಮಂಡ್ಯದಿಂದ ಸ್ಪರ್ಧಿಸಿರುವ ನಾನು ಇದೇ ಬಿಜೆಪಿ ಸಹಾಯದಿಂದ ಮೊದಲ ಬಾರಿಗೆ ಸಿಎಂ ಆದಾಗ ಲೋಕೋಪಯೋಗಿ ಕಟ್ಟಡ, ಸಬ್‌ ಸ್ಟೇಷನ್‌ಗಳು, ಹಲವು ನೂತನ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ರಾಜಕೀಯ ಭಿನ್ನಾಭಿಪ್ರಾಯದಿಂದ ದೂರ ಹೋಗಿ ಕಾಂಗ್ರೆಸ್‌ನಿಂದ ಅಧಿ ಕಾರ ಅನುಭವಿಸುತ್ತಿರುವ ಕೆಲವರು ಮಂಡ್ಯ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next