Advertisement

ರೈತರ ಮನೆಗೆ ತೆರಳಿ ಕೃಷಿಗೆ ಪ್ರೇರೇಪಿಸಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

10:18 AM Jun 27, 2019 | keerthan |

ಉಡುಪಿ: ಪ್ರತಿ ಹಳ್ಳಿಯ ಯುವಕರು ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮನವಿ ಮಾಡಿದ್ದಾರೆ.

Advertisement

ಉಡುಪಿ ಜಿಲ್ಲೆಯೊಂದರಲ್ಲೆ ಸುಮಾರು 5-6 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಭೂಮಿ ಹಡೀಲು ಬಿದ್ದಿದೆ ಎಂಬ ವರದಿ ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿ ಮಾಡುತ್ತ ಹೋದರೆ “ಭೂಮಿ ಸಸ್ಯ ಶಾಮಲೆಯಾಗಲಿ, ದೇಶಕ್ಕೆ ಸಮೃದ್ಧಿಯಾಗಲಿ’ ಎಂದು ಪ್ರಾರ್ಥಿಸುವುದಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ರೈತ ಬಂಧುಗಳು ಉಳುವ ಫ‌ಲವತ್ತಾದ ಭೂಮಿಯನ್ನು ಹಡೀಲು ಬಿಡಬಾರದು. ಕನಿಷ್ಠ ಒಂದು ಬೆಳೆಯನ್ನಾದರೂ ತೆಗೆಯಲು ಮುಂದಾಗಬೇಕು. ಸಾವಿರ ಸಮಸ್ಯೆಗಳನ್ನು (ಹವಾಮಾನ) ಸಹಿಸಿಕೊಂಡು ಸೈನಿಕರು ದೇಶದ ಸುರಕ್ಷತೆಗಾಗಿ ಬದುಕು ಸವೆಸುತ್ತಿದ್ದಾರೆ. ಅದೇರೀತಿ ಕೃಷಿಗೆ ಸಮಸ್ಯೆ ಸಾವಿರವಿದ್ದರೂ ಕೃಷಿಯಿಂದ ದೂರವಾದರೆ ಇಡೀ ದೇಶಕ್ಕೆ ಗಂಡಾಂತರ ನಿಶ್ಚಿತ. ಆದ್ದರಿಂದ ಪ್ರತೀ ಹಳ್ಳಿ, ಊರಿನ ಯುವಕರು ಗ¨ªೆ ಹಡೀಲು ಬಿಟ್ಟ ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕು. ಈ ಕಾರ್ಯ ಅತ್ಯಂತ ತುರ್ತಾಗಿ ನಡೆಯಲಿ’ ಎಂದು ಶ್ರೀಗಳು ತಮ್ಮ ವಿಶೇಷ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next