Advertisement

ಸುಳ್ಳು ಭರವಸೆ ನೀಡುವುದು ಬಿಜೆಪಿ ಕಾಯಕ

04:45 PM Sep 06, 2022 | Team Udayavani |

ಸೇಡಂ: ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವುದನ್ನು ಬಿಜೆಪಿ ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ. ಕೊಟ್ಟ ಭರವಸೆ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತವೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆರೋಪಿಸಿದರು.

Advertisement

ಪಟ್ಟಣದ ಗಣೇಶ ನಗರ ಬಡಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ದೇಶದ ಜನರ ಹಿತ ಕಾಪಾಡುವುದು, ಜನರಿಗೆ ಮೂಲ ಸೌಕರ್ಯ ನೀಡುವುದು, ಶಾಂತಿ ನೆಲೆಸುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆ ತಳಹದಿಯ ಮೇಲೆ ನಾವು ಕೆಲಸ ಮಾಡಿದ್ದೇವೆ. ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಇಂದು ಅಭಿವೃದ್ಧಿಯ ಮಾತೇ ಇಲ್ಲ, ಎಲ್ಲಿ ನೋಡಿದರೂ ಲಂಚಾವತಾರ ತಾಂಡವವಾಡುತ್ತಿದೆ ಎಂದರು.

ಡಾ| ಭಾಗ್ಯಶ್ರೀ ಪಾಟೀಲ ಊಡಗಿ ಮಾತನಾಡಿ, ನಮಗೆ ಯಾವ ಅಧಿಕಾರದ ಆಸೆಯೂ ಇಲ್ಲ ತಾಲೂಕಿನ ಜನರು ತೋರುವ ಪ್ರೀತಿಗಿಂತ ದೊಡ್ಡ ಸ್ಥಾನಮಾನ ಮತ್ತೊಂದಿಲ್ಲ. ಸದಾ ಕ್ಷೇತ್ರದ ಜನರ ಸೇವೆಗಾಗಿ ಡಾ| ಶರಣಪ್ರಕಾಶ ಪಾಟೀಲರು ಶ್ರಮಿಸಿದ್ದಾರೆ. ನಮ್ಮ ಕುಟುಂಬದವರು ಅವರ ಸಾರ್ವಜನಿಕ ಸೇವೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಅವರು ಅನೇಕ ರೀತಿಯ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಡಾ| ಶರಣಪ್ರಕಾಶ ಪಾಟೀಲರ ಕೈ ಬಲಪಡಿಸಬೇಕಿದೆ ಎಂದರು.

ಈರಮ್ಮ ಪಾಟೀಲ, ಮಲ್ಲಿಕಾರ್ಜುನ ನಾಡಗೌಡ, ರೇವಣಸಿದ್ದಪ್ಪ ಬಂಗಾರ ಅವರ ಜೊತೆಗೆ ನೂರಾರು ಜನರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಪ್ರಮುಖರಾದ ಬಸಮ್ಮ ಪಾಟೀಲ, ಶೀಲಾ, ಈರಮ್ಮ ಪಾಟೀಲ ಇದ್ದರು. ಅಶೋಕರೆಡ್ಡಿ ಕೇರಳ್ಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next