Advertisement

ಕುಡಿಯುವ ನೀರು ಕೊಟ್ಟರೆ ಮಾತ್ರ ವೋಟು

12:04 PM Mar 25, 2017 | |

ನಂಜನಗೂಡು: ಸುಡು ಬೇಸಿಗೆಯಲ್ಲಿ ನೀರಿಲ್ಲದೆ ನಾವು ಪರದಾಡುತ್ತಿದ್ದರೆ ಇವರು ಅಧಿಕಾರಕ್ಕಾಗಿ ವೋಟು ಕೇಳಲು ಬಂದಿದ್ದಾರೆ ಮೊದಲು ನೀರು ನೀಡಲಿ ನಂತರ ಓಟು ಕೇಳಲಿ ಎನ್ನುತ್ತಾರೆ ವಳಗೆರೆ ಗ್ರಾಮದ ಮಹಿಳೆಯರು.

Advertisement

ರಾಜ್ಯದ ಲೋಕೋಪಯೋಗಿ ಸಚಿವ ಡಾ ಎಚ್‌.ಸಿ ಮಹದೇವಪ್ಪ, ಸಂಸದ ಆರ್‌.ಧ್ರುವನಾರಾಯಣ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಮತಯಾಚನೆ ನಡೆಸಿ ಹಲ್ಲರೆಯತ್ತ ತೆರಳಿದ ನಂತರ ಪತ್ರಿಕೆ ಗ್ರಾಮದಲ್ಲಿ ಕಣ್ಣಾಡಿಸಿದಾಗ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರ ಬಾಯಲ್ಲಿ ಬಂದ ನೋವಿನ ಮಾತಿದು.

ಹೇಗಿದೆ ಚುನಾವಣೆ ಎಂದಿದ್ದಕ್ಕೆ ಕಿಡಿಕಾರಿದ ಈ ತಾಯಂದಿರು ಇಲ್ಲಿ ನಮಗೆ ಕುಡಿಯಲೂ ನೀರಿಲ್ಲ ಇವರಿಗೆ ಚುನಾವಣೆಯಂತೆ ಎಂದು ಒಂದೇ ಸಮನೆ ನಮ್ಮನ್ನೇ  ದಭಾಯಿಸತೊಡಗಿದರು. ಇವರಿಗೆ ಅಭಿವೃದ್ದಿ ಬೇಕಾಗಿಲ್ಲ ನಮ್ಮ ಮತ ಪಡೆದು ಹಣ ಮಾಡಲು ಮಾತ್ರ ಅಧಿಕಾರ ಬೇಕು.

ಬೀದಿಗೊಂದು ಬೋರಿಗೆ ಆದರೆ ಯಾವ ಬೋರ್‌ನಲ್ಲೂ ನೀರಿಲ್ಲ. ಪಂಚಾಯತಿಯವರು ನೀರು ನೀಡುತ್ತೇವೆ ಎಂದು ಮೂರು ದಿನಗಳಿಗೊಮ್ಮೆ  ನೀರಿನ ಟ್ಯಾಂಕರ್‌  ಕಳಿಸುತ್ತಾರೆ ಅದು ಒಂದು ಕುಟುಂಬಕ್ಕೂ ಸರಿಯಾಗಿ ಸಾಕಾಗಲ್ಲ ಎಂದು ದೂರಿದರು. 

Advertisement

Udayavani is now on Telegram. Click here to join our channel and stay updated with the latest news.

Next