Advertisement

ಯಾವ್ದಾದ್ರೂ ಹತ್ತಕ್ಕೆ ಮಾರ್ಕ್ಸ್ ಕೊಡಿ!

10:12 AM Jan 15, 2020 | mahesh |

ತ್ಯಾಗರಾಜ ಪರಮಶಿವ ಕೈಲಾಸಂ ಅಂದರೆ ಹೆಚ್ಚಿನವರಿಗೆ ತಕ್ಷಣ ಅರ್ಥವಾಗುವುದಿಲ್ಲ . ಆದರೆ, ಟಿ ಪಿ ಕೈಲಾಸಂ ಅಂದರೆ- “ಓಹ್‌, ಅವರಾ? ಅವರು ಕನ್ನಡ ಸಾಹಿತ್ಯದ ಮುಖ್ಯ ಲೇಖಕರು, ಮಹಾನ್‌ ನಾಟಕಕಾರರು’ ಅನ್ನುವ ವಿವರ ದೊರಕುತ್ತದೆ. ಕೈಲಾಸಂ ಅವರ ತಂದೆ, ಆ ಕಾಲಕ್ಕೇ ನ್ಯಾಯಾಧೀಶರಾಗಿದ್ದರು. ಅಂಥವರ ಪುತ್ರ ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದು ಪ್ರಸಂಗ ಹೀಗಿದೆ.

Advertisement

ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತರಾಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.

ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ- ಮಾನ್ಯ ಪರೀಕ್ಷಕರೆ, ನಿಮಗೆ ಇಷ್ಟವಾದ ಯಾವುದಾದರೂ ಹತ್ತು ಉತ್ತರಗಳನ್ನು ನೀವೇ ಆಯ್ಕೆ ಮಾಡಿಕೊಂಡು. ಅಷ್ಟಕ್ಕೇ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!

ಇದನ್ನು ಓದಿದ ಪರಿವೀಕ್ಷಕರಿಗೆ ಹೇಗೆ ಆಗಿರಬೇಡ. ಪರೀಕ್ಷೆ ಬರೆಯುವುದು ಅಂದರೆ ಹೀಗಲ್ವಾ?

Advertisement

Udayavani is now on Telegram. Click here to join our channel and stay updated with the latest news.

Next